ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ನಿರ್ಭಯ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ 41 ಪೊಲೀಸ್ ಠಾಣೆ ಗಳಿಗೆ ನೀಡಿರುವ ದ್ವಿಚಕ್ರ ವಾಹನಗಳನ್ನು ಹಸಿರು ನಿಶಾನೆ ತೋರಿಸುವ ಮೂಲಕ ಲೋಕಾರ್ಪಣೆ.
ತುಮಕೂರು ಜಿಲ್ಲೆಯಲ್ಲಿ ಸಿ.ಇ.ಐ.ಆರ್ (CEIR) ಪೋರ್ಟಲ್ ಮೂಲಕ ಇತ್ತೀಚೆಗೆ ಕಳೆದುಕೊಂಡಿದ್ದ ಮೊಬೈಲ್ನ್ನು ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ. ವಾರಸುದಾರರು ಮೊಬೈಲ್ ಕಳೆದ ಕೂಡಲೇ
#CEIR
ಪೋರ್ಟಲ್ ಭೇಟಿ ನೀಡಿ ನೊಂದಾಯಿಸಿದ್ದರು.
@Copsview
ಈ ದಿನ ಬೆಳಗ್ಗೆ ಪ್ರೊಬೆಷನರಿ ಐಪಿಎಸ್ ಕನ್ನಿಕ ಸಿಕ್ರಿ ವಾಲ್ ಹಾಗೂ ಉದೇಶ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಕುಣಿಗಲ್ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿ ಗಳೊಂದಿಗೆ ಹುಲಿಯೂರುದುರ್ಗ ಠಾಣಾ ವ್ಯಾಪ್ತಿಯ ಹುತ್ತರಿದುರ್ಗ ಕೋಟೆ ಸುತ್ತಮುತ್ತ ಇದ್ದ ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹಣೆ
ದಿನಾಂಕ: 26.06.2021 ರಂದು ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಯನ್ನು ಶ್ರೀ. ಚಂದ್ರಶೇಖರ್ ಐ.ಪಿ.ಎಸ್. ಐಜಿಪಿ ಕೇಂದ್ರ ವಲಯ, ಬೆಂಗಳೂರು ರವರು ಉದ್ಘಾಟಿಸಿದರು.
ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದ 133.81 ಕೆ.ಜಿ ಗಾಂಜಾ ಸೊಪ್ಪನ್ನು ನಾಶಪಡಿಸಲಾಯಿತು.
ಪೊಲೀಸ್ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಈ ದಿನ ಕಚೇರಿಯಲ್ಲಿ ಗೌರವಯುತವಾಗಿ ಸನ್ಮಾನಿಸಲಾಯಿತು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ 72 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಇತ್ತೀಚಿಗೆ ರಾಷ್ಟ್ರಪತಿ ಪದಕ ಹಾಗೂ ಮುಖ್ಯಮಂತ್ರಿ ಪದಕ ಪಡೆದ ತುಮಕೂರು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ಇಂದು ಸಂಜೆ 6 ಗಂಟೆಯ. ಸಮಯದಲ್ಲಿ ಕೋವಿಡ್ 19 ಸೀಲ್ ಡೌನ್ ಪ್ರದೇಶಗಳಾದ ಸದಾಶಿವ���ಗರ, ಕೆಹೆಚ್ ಬಿ ಕಾಲೋನಿ ಮತ್ತು ಖಾದರ್ ನಗರ ಗಳಿಗೆ ಕೇಂದ್ರವಲಯದ ಐಜಿಪಿ ಶ್ರೀ ಶರತ್ ಚಂದ್ರ, ಐಪಿಎಸ್ ರವರು ಭೇಟಿ ನೀಡಿ ಪರಿಶೀಲಿಸಿದರು.
ದಿನಾಂಕ : 13.06.2021 ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ರಾಹುಲ್ ಕುಮಾರ್ ಶಹಾಪುರವಾಡ್, ಐಪಿಎಸ್ ರವರು ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಮಾಲೋಚನೆ ಸಭೆ ನಡೆಸಿ, ಸೂಕ್ತ ನಿರ್ದೇಶನಗಳನ್ನು ನೀಡಿದರು.
ತುಮಕೂರಿನ ಚರ್ಚ್ ಸರ್ಕಲ್ ಬಳಿ ಟ್ರಾಫಿಕ್ ಎ.ಎಸ್.ಐ ರವರು ಕರ್ತವ್ಯದಲ್ಲಿದ್ದಾಗ ಸಾರ್ವಜನಿಕ ವ್ಯಕ್ತಿಯನ್ನು ವಾಹನ ಸಮೇತ ತಳ್ಳಿ ಬೀಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಮನಗಂಡು ನೊಂದ ಸಾರ್ವಜನಿಕ ವ್ಯಕ್ತಿ ಹಾಗೂ ಸಂಚಾರಿ ಠಾಣೆಯ ಎ.ಎಸ್.ಐ ರವರನ್ನು ಕಚೇರಿಗೆ ಕ���ೆಯಿಸಿ ಎ.ಎಸ್.ಐ ರವರಿಂದ ಕ್ಷಮೆ ಕೇಳಿಸಲಾಗಿರುತ್ತದೆ
ಇಂದು ತುಮಕೂರು ಜಿಲ್ಲೆಯ ನೂತನ
@SPTUMKUR
ಪೊಲೀಸ್ ಅಧೀಕ್ಷಕರಾಗಿ ಶ್ರೀ ಅಶೋಕ್ ಕೆ ವಿ ಐ.ಪಿ.ಎಸ್ ರವರು ನಿರ್ಗಮಿತ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ಕುಮಾರ್ ಶಹಾಪುರ್ವಾಡ್ ಐ.ಪಿ.ಎಸ್ ರವರಿಂದ ಅಧಿಕಾರ ಸ್ವೀಕರಿಸಿದರು.
@IgpRange
@DgpKarnataka
ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ.!!! ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ, ಅಲ್ಲೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳು
ಕರೋನಾ ಸೋಂಕು ತಡೆಗಾಗಿ ಸರ್ಕಾರ ನೇಮಕ ಮಾಡಿರುವ ಕೋವಿಡ್ ನಿಯಂತ್ರಣ ಉಸ್ತುವಾರಿ ಎಡಿಜಿಪಿ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ರವರು ತುಮಕೂರು ನಗರಕ್ಕೆ ಭೇಟಿ ನೀಡಿ ಕರೋನಾ ಮಾರ್ಗಸೂಚಿ ಪಾಲನೆ ಸಂಬಂಧ ಪರಿಶೀಲನೆ ನಡೆಸಿದರು.
@seemantsingh96
@IgpRange
ಮಾನ್ಯ ಶ್ರೀ. ಚಂದ್ರಸೇಖರ್ ಐ.ಪಿ.ಎಸ್. ಐಜಿಪಿ ಕೇಂದ್ರ ವಲಯ, ಬೆಂಗಳೂರು ರವರು ತುಮಕೂರು ಜಿಲ್ಲೆಯಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 9.5 ಕೋಟಿ ಮೌಲ್ಯದ " ಸ್ವತ್ತು ಪ್ರದರ್ಶನ ಮತ್ತು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮ" ವನ್ನು ನೆರವೇರಿಸಿದರು.
#tumkurdistrictpolice
ದಿನಾಂಕ: 28.10.2021 ರಂದು ತುಮಕೂರು ಜಿಲ್ಲಾ ಸಶಸ್ತ್ರ ಪಡೆಯ ಶಸ್ತ್ರಾಗಾರದಲ್ಲಿ ನಾಗರೀಕರು ಗಳಿಂದ ಜಮಾವಣೆಗೊಂಡ ವಾಪಸ್ಸು ಪಡೆಯದ ಅನುಪಯುಕ್ತ ಆಯುಧಗಳನ್ನು ಸರ್ಕಾರದ ಆದೇಶದ ಪ್ರಕಾರ ನಾಶಪಡಿಸಲು ತುಮಕೂರು ಜಿಲ್ಲಾಧಿಕಾರಿಗಳವರಿಂದ ಪರಿವೀಕ್ಷಣೆ ನೆಡೆಸಲಾಯಿತು.
ಶ್ರೀ ಅಲೋಕ್ ಕುಮಾರ್ ಐಪಿಎಸ್, ಎಡಿಜಿಪಿ ಸಿ.ಟಿ.ಆರ್.ಎಸ್ ಬೆಂಗಳೂರು ರವರು ತುಮಕೂರು ಜಿಲ್ಲೆಯ ಅಪಘಾತ ವಲಯಗಳಿಗೆ ಭೇಟಿ ನೀಡಿದರು ಹಾಗೂ ರಸ್ತೆ ಅಪಘಾತ ತಡೆಗಟ್ಟುವ ಸಂಬಂಧ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶ್ರೀ ಡಾ. ಬಿ.ಆರ್ ರವಿಕಾಂತೇಗೌಡ , ಐಪಿಎಸ್, ಐಜಿಪಿ ಕೇಂದ್ರ ವಲಯ ಹಾಗೂ
ಪೊಲೀಸ್ ಇಲಾಖಾವತಿಯಿಂದ ಕ್ಯಾತ್ಸಂದ್ರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮೈದಾನದಲ್ಲಿ " ಬಡವರ ಬಾಗಿಲು " ಎಂಬ ಹೆಸರಿನಲ್ಲಿ ಬಡವರಿಗೆ ತರಕಾರಿಗಳನ್ನು ಉಚಿತವಾಗಿ ವಿತರಿಸಿಲಾಯಿತು. ಈ ಸಮಯದಲ್ಲಿ ಈ ಸಮಯದಲ್ಲಿ ಕ್ಯಾತ್ಸಂದ್ರ ಇನ್ಸ್ಪೆಕ್ಟರ್ ಶ್ರೀಧರ್, ಪಿಎಸ್ಐ ರಾಮ್ ಪ್ರಸಾದ್ ಮತ್ತು ಸಿಬ್ಬಂದಿಯವರು ಹಾಜರಿದ್ದರು.
ತುಮಕೂರು ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಶ್ರೀ. ರಾಹುಲ್ ಕುಮಾರ್ ಶಹಾಪುರವಾಡ್ ಐ.ಪಿ.ಎಸ್ ರವರು ದಿನಾಂಕ: 10.06.2021 ರಂದು ಪೊಲೀಸ್ ಅಧೀಕ್ಷಕರಾದ ಡಾ. ಕೋನ ವಂಸಿ ಕೃಷ್ಣ, ಐ.ಪಿ.ಎಸ್ ರವರಿಂದ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
@CMofKarnataka
@DgpKarnataka
@Copsview
@IgpRange
ಪೊಲೀಸ್ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಿವೃತ್ತಿ ಹೊಂದಿದ ಪಿ.ಎಸ್.ಐ ಹಾಗೂ ಎ.ಎಸ್.ಐ/ ಎ.ಅರ್.ಎಸ್.ಐ ರವರುಗಳಿಗೆ ದಿನಾಂಕ: 31.05.2021 ರಂದು ಕಚೇರಿಯಲ್ಲಿ ಗೌರವಯುತವಾಗಿ ಸನ್ಮಾನಿಸಲಾಯಿತು.
ಪ್ರಪ್ರಥಮ ಬಾರಿಗೆ ತುಮಕೂರು ಜಿಲ್ಲೆಯ ಪೊಲೀಸ್ ಇಲಾಖೆ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯ ಕೌಂಟರ್ ನ್ನು ತೆರೆಯಲಾಗಿದೆ. ಸದರಿ ಕೌಂಟರ್ ನಲ್ಲಿ ERSS ಬಗ್ಗೆ, LHMS ಬಗ್ಗೆ ಹಾಗೂ ರಸ್ತೆಯ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ಎಲ್ಲರೂ ತುಮಕೂರು ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿ ಕೋವಿದ್ 19 ಸಾಂಕ್ರಾಮಿಕ ಕಾಯಿಲೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ದಿನಾಂಕ 17-07-2020 ರಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕರ್ನಾಟಕ ರಾಜ್ಯದ ( ಕಾನೂನು & ಸುವ್ಯವಸ್ಥೆ ) ಎ.ಡಿ.ಜಿ.ಪಿ ರವರಾದ ಶ್ರೀ ಅಮರ್ ಕುಮಾರ್ ಪಾಂಡೆ, ಐಪಿಎಸ್ ರವರು ತುಮಕೂರು ಜಿಲ್ಲೆಯಲ್ಲಿ ಕೋವಿಡ್ -19 ಲಾಕ್ ಡೌನ್ ಸಮಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಿದರು.
ಜಿಲ್ಲೆಯ ಕರ್ತವ್ಯ ನಿರತ ಸಬ್ ಇನ್ಸ್ಪೆಕ್ಟರ್-1, ಸಹಾಯಕ ಸಬ್ ಇನ್ಸ್ಪೆಕ್ಟರ್/ ಸಹಾಯಕ ಸಶಸ್ತ್ರ ಸಬ್ ಇನ್ಸ್ಪೆಕ್ಟರ್- 8, ಹೆಡ್ ಕಾನ್ಸ್ ಟೆಬಲ್ - 1 , ಮತ್ತು ಲಿಪಿಕ ಸಿಬ್ಬಂದಿ - 1 ಒಟ್ಟು 11 ಅಧಿಕಾರಿ ಮತ್ತು ಸಿಬ್ಬಂದಿಗಳು ಇಂದು ನಿವೃತ್ತಿ ಗೊಂಡಿದ್ದು ಇವರುಗಳನ್ನು ಇಲಾಖೆಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
#tumkurdistrictpolice
ಪೊಲೀಸ್ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ದಿನಾಂಕ: 01.05.2021 ರಂದು ಕಚೇರಿಯಲ್ಲಿ ಗೌರವಯುತವಾಗಿ ಸನ್ಮಾನಿಸಲಾಯಿತು.
ಮಾನ್ಯ ಡಿ.ಜಿ. & ಐ.ಜಿ.ಪಿ., ಕರ್ನಾಟಕ ರಾಜ್ಯ, ಬೆಂಗಳೂರು ರವರು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಕೋರೋನಾ ಸಂಬಂಧ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಸ್.ಪಿ. ರವರನ್ನು ಶ್ಲಾಘಿಸಿದರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಗೃಹ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಿಂದ ತುಮಕೂರು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯ ಕಟ್ಟಡದ ಉದ್ಘಾಟನೆ.
#chikkanayakanahallips
"COVID WARRIORS WALK "- at Tiptur Taluk ... Warriors (Police, Revenue, Social welfare, Panchayat and Rural development, Health, Anganwadi, BESCOM, Home Gaurds, Fire, Municipality, Media and others ) ..
ತುಮಕೂರಿನ ಡಿಎಸ್ಪಿ ಕಚೇರಿಯಲ್ಲಿ 135 ಜನ ಗೃಹ ರಕ್ಷ ದಳ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ದಿನಸಿ ಮತ್ತು ತರಕಾರಿಗಳ ಬ್ಯಾಗ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಿಎಸ್ಪಿ ತಿಪ್ಪೇಸ್ವಾಮಿ, ನಗರ ವೃತ್ತ ನಿರೀಕ್ಷಕ ನವೀನ್, ಪಿಎಸ್ಐಗಳಾದ ವಿಜಯಲಕ್ಷ್ಮೀ, ಗಂಗಮ್ಮ, ಮಂಗಳಮ್ಮ ಮತ್ತಿತರರು ಉಪಸ್ಥಿತರಿದ್ದರು.
ದಿನಾಂಕ: 08.09.2023 ರಂದು ತುಮಕೂರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಕವಾಯತನ್ನು ವೀಕ್ಷಿಸಿ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಲಾಯಿತು.
@SPTumkur
@DgpKarnataka
@IgpRange
@venkatashok
ಸಂಭವನೀಯ ಕಳ್ಳತನ ಮತ್ತು ಕಳ್ಳತನ ತಡೆಗಟ್ಟುವಿಕೆಗಾಗಿ ತುಮಕೂರಿನಲ್ಲಿ ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡುವ ವ್ಯವಸ್ಥೆ (Locked House Monitoring System) ತಂತ್ರಾಂಶದ ಅಡಿಯಲ್ಲಿ ಸ್ಮಾರ್ಟ್ ಸಿಟಿ ತುಮಕೂರು ವತಿಯಿಂದ ಕ್ಯಾಮೆರಾ ಗಳನ್ನು ನೀಡುವುದರ ಮೂಲಕ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಾಧುಸ್ವಾಮಿ ರವರಿಂದ ಚಾಲನೆ.
ಪತ್ರಿಕಾ ಪ್ರಕಟಣೆ
ದಿನಾಂಕ: 27-04-2020.
ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳು ಸಂಚರಿಸುವ ಬಗ್ಗೆ ಸುಭಾಹು ಎನ್ನುವ ಹೊಸ ಅಪ್ಲಿಕೇಶನ್ ಅಳವಡಿಸಿಕೊಂಡಿದ್ದು ಇದರಲ್ಲಿ ಪ್ರತಿಯೊಂದು ವಾಹನಗಳ ವಿವರಗಳನ್ನು / ಛಾಯಾಚಿತ್ರಗಳನ್ನು ಹಾಗೂ ವಾಹನ ಪ್ರಯಾಣಿಕರು/ ಚಾಲಕರು ಸಂಚರಿಸಬಹುದಾದ ಸ್ಥಳ ಉದ್ದೇಶಗಳನ್ನು ನಮೂದಿಸಲಾಗುವುದು.
ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪುರ ಗ್ರಾಮದ ಶ್ರೀಕಲ್ಲೇಶ್ವರ ಸ್ವಾಮಿ ರಥಕ್ಕೆ ಬೆಂಕಿ ಹಚ್ಚಿದವನ ಬಂಧನದ ಬಗ್ಗೆ ಪತ್ರಿಕಾ ಪ್ರಕಟಣೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ತುಮಕೂರು ನಗರದ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ವಾಹನ ಸವಾರನನ್ನು ಪತ್ತೆ ಮಾಡಿ ವಾಹನವನ್ನು ಜಪ್ತಿ ಮಾಡಿ ಆತನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ. Bikes seized and action being taken against the RC owners.
@venkatashok
ದಿನಾಂಕ: 29.03.2021 ರಂದು ತುಮಕೂರು ನಗರ ಉಪವಿಭಾಗದ ಜನಸಂಪರ್ಕ ಸಭೆಯನ್ನು ನಡೆಸಲಾಯಿತು. ಸದರಿ ಸಭೆಯಲ್ಲಿ ಸಾರ್ವಜನಿಕರಿಗೆ ಪೊಲೀಸ್ ಬೀಟ್ ವ್ಯವಸ್ಥೆ ಬಗ್ಗೆ, LHMS App ಬಗ್ಗೆ, ERSS 112 ಬಗ್ಗೆ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ E-Lost ವರದಿ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು.
ತುಮಕೂರು ಜಿಲ್ಲಾ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ತಮ್ಮ ಸಮಸ್ಯೆಗಳ ಬಗ್ಗೆ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು ಹಾಗೂ ನೂತನವಾಗಿ ಆಗಮಿಸಿದ ಪೊಲೀಸ್ ಅಧೀಕ್ಷಕರಿಗೆ ಶುಭ ಕೋರಿದರು.
#tumkurdistrictpolice
ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್ಇಡಿ (LED) ದೀಪಗಳನ್ನು ವಾಹನಗಳಿಗೆ ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಕೇಂದ್ರ ಮೋಟಾರು ಕಾಯ್ದೆ(CMV)ಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು, ಕಾಯ್ದೆ
ಪೊಲೀಸರೆಂದರೆ ಭಯಪಡಿಸುವ ವ್ಯಕ್ತಿಗಳಲ್ಲ, ತಾಯಿ ಹೃದಯದ ಮನುಷ್ಯರು, ಖಾಕಿ ಮೈಮೇಲೆ ಬಂದರೆ ಅತಿಮಾನುಷರಲ್ಲ, ನೊಂದುಬೆಂದವರಿಗೆ ಅಭಯ ನೀಡುವ ಮನಸಿಗರು, ಒಳಿತು ಮಾಡುವ ಉದ್ದೇಶದಿಂದ. ಪೊಲೀಸರೆಂದರೆ ಕೇವಲ ಕಾನೂನುಗಳನ್ನು ಕಾಪಾಡುವ ಮನುಷ್ಯರಲ್ಲ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಸಿಪಾಯಿಗಳು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನಸ್ಸುಳ್ಳವರು.
ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರ ಗ್ರಾಮದ ತೋಟದಲ್ಲಿರುವ ಮನೆಯಲ್ಲಿ ವ್ಯಾಪಾರ ಮಾಡುವ ಸೋಗಿನಲ್ಲಿ ಬಂದು ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಹಿನ್ನೆಲೆಯಲ್ಲಿ, ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ಪತ್ತೆ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸಲಹೆ ಸೂಚನೆ ನೀಡಲಾಯಿತು.
ಕಳ್ಳಂಬೆಳ್ಳ ಠಾಣಾ ಸರಹದ್ದು ದೊಡ್ಡಾಲದಮರ ಗ್ರಾಮದಲ್ಲಿ ಸುಮಾರು 30 ರಿಂದ 40 ಸಂಸಾರಗಳು ಬುಡುಬುಡಿಕೆ ಹಾಗೂ ಸಿಲ್ಲೇಕ್ಯಾತ ಜನಾಂಗ ವಾಸವಿದ್ದು ಇಲ್ಲಿ ಸುಮಾರು ಪಾಸಿಟಿವ್ ಕೇಸುಗಳು ಇದ್ದು ಮೈಕ್ರೋ ಕಂಟೋನ್ಮೆಂಟ್ ಮಾಡಿದ್ದು ಸದರಿಯವರಿಗೆ ಜೀವನ ಸಾಗಿಸಲು ಕಷ್ಟಕರ ವಾಗಿದ್ದು, ಹಸಿರುದಳ ಸಂಸ್ಥೆಯಿಂದ ನೀಡಿದ ದಿನಸಿ ಸಾಮಗ್ರಿಗಳ ವಿತರಣೆ.
ಶ್ರೀ ಸೀಮಂತ್ ಕುಮಾರ್ ಸಿಂಗ್, ಐಪಿಎಸ್ ಮಾನ್ಯ ಎ.ಡಿ.ಜಿ.ಪಿ ಹಾಗೂ ತಿಪಟೂರಿನ ಹೊನ್ನವಳ್ಳಿ ಯವರಾದ ಶ್ರೀ ಚೇತನ್ ಐಪಿಎಸ್ ಎಸ್. ಪಿ. Coastal Security ರವರ ಸಹಾಯ ದಿಂದ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯು ತಿಪಟೂರು ಸರ್ಕಾರಿ ಆಸ್ಪತ್ರೆಗೆ Oxygen Concentrator ನ್ನು ಹಸ್ತಾಂತರ ಮಾಡಲಾಯಿತು.
@DgpKarnataka
@seemantsingh96
ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಶ್ರೀ ರಾಹುಲ್ ಕುಮಾರ್ ಶಹಾಪೂರ್ ವಾಡ್, IPS ರವರಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿಸಲಾಯಿತು, ಸಮಾರಂಭದಲ್ಲಿ
@IgpRange
@DCTumakuru
ಹಾಗೂ Addl.SP ಶ್ರೀ ವಿ. ಮರಿಯಪ್ಪ ರವರು ಉಪಸ್ಥಿತರಿದ್ದರು.
@DCPSouthBCP
@venkatashok
ದಿನಾಂಕ: 01-02-2021 ರಂದು ತಿಪಟೂರು ನಗರದ ಕಲ್ಪತರು ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಅಭಿಯಾನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ವಾಹನ ಚಲಾಯಿಸುವ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ತುಮಕೂರು ಪೊಲೀಸ್ ಕಾಲ್ನಡಿಗೆ ಗಸ್ತು ತಿರುಗಲಿದ್ದಾರೆ ಈ ನೂತನ ಪ್ರಯೋಗ ವನ್ನು ಮೆಳೆಕೋಟೆ ರಸ್ತೆಯಿಂದ ಚಾಲನೆ ನೀಡಲಾಯಿತು. ಜಿಲ್ಲೆ ಎಲ್ಲಾ ಪೊಲೀಸ್ ಠಾಣೆಗಳಿಂದ ಐದು ಜನರ ತಂಡ ರಚಿಸಿ ಕೋವಿಡ್ 19 ರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ, ಮುನ್ನೆಚ್ಚರಿಕೆ ಹಾಗೂ ಮಾಸ್ಕ್ ಧರಿಸಿಕೂಳ್ಳದಿರುವವರ ಮೇಲೆ ದಂಡ ಕೂಡ ಹಾಕಲಾಗುತ್ತದೆ.
ದಿನಾಂಕ: 26.06.2022 ರಂದು " ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ" ಯ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಎನ್.ಡಿ.ಪಿ.ಎಸ್ ಕಾಯಿದೆ ಅಡಿಯಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಕೇಂದ್ರವಲಯದ ಐ.ಜಿ.ಪಿ. ಶ್ರೀ ಎಂ ಚಂದ್ರಸೇಖರ್, ಐಪಿಎಸ್ ರವರ ನೇತೃತ್ವದಲ್ಲಿ ನಾಶಪಡಿಸಲಾಗಿರುತ್ತದೆ.
ಜಿಲ್ಲಾ ಪೊಲೀಸ್ ಕಚೇರಿ ಹತ್ತಿರ ದಿನಾಂಕ:08.06.2020 ರಂದು ಬೆಳಿಗ್ಗೆ 10.00 ಗಂಟೆಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಾಧುಸ್ವಾಮಿ ರವರು ಸ್ಮಾರ್ಟ್ ಸಿಟಿ ತುಮಕೂರು ವತಿಯಿಂದ “ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್ಮೆಂಟ್ ಕಂಟ್ರೋಲ್ ಸೆಂಟರ್ “ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇಂದು ತುಮಕೂರು ನಗರದ ಅಂತರಸನಹಳ್ಳಿ ಮೇಲ್ಸೆತುವೆ ಬಳಿ ವಾಹನ ತಪಾಸಣೆ ವೇಳೆ ಭೇಟಿ ನೀಡಿ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
@venkatashok
@IgpRange
@DgpKarnataka
ಎಸ್.ಪಿ. ಕಚೇರಿ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಮರುಬಳಕೆಯ ಪಿಪಿಇ ಕಿಟ್, ಮಾಸ್ಕ್, ಫೇಸ್ ವೈಸರ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಮಾಧುಸ್ವಾಮಿ ವಿತರಿಸಿದರು. ದಾನಿಗಳಾದ ತುಮಕೂರು ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್ ನ ಮುಖಸ್ಥ ಎನ್.ಎಸ್.ಜಯಕುಮಾರ್, ಶಾಸಕ ಜ್ಯೊತಿಗಣೇಶ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಜೊತೆಗಿದ್ದರು.
ತುಮಕೂರು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ಹಾಗೂ ಕೋವಿಡ್ - 19 ರಿಂದ ರಕ್ಷಣೆ ಪಡೆಯಲು ಕಿಯೋಸ್ಕ್ ಗಳನ್ನು ಸ್ಥಾಪನೆ ಮಾಡಲಾಗಿರುತ್ತದೆ. ಇದರೊಂದಿಗೆ ಜನಸ್ನೇಹಿ ಪೊಲೀಸ್ ಹಾಗೂ ಪೊಲೀಸ್ ರಕ್ಷಣೆಯನ್ನು ಮಾಡಿದಂತಾಗುತ್ತದೆ.
ತುಮಕೂರು ನಗರದ ರಸ್ತೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ ಹಾಗೂ ಹೆಚ್ಚು ಶಬ್ಧಮಾಲಿನ್ಯ ಉಂಟು ಮಾಡುತ್ತಿದ್ದ ವಾಹನವನ್ನು ಪತ್ತೆ ಮಾಡಿ ವಾಹನವನ್ನು ಜಪ್ತಿ ಮಾಡಿ ಆತನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ. Bikes seized and action being taken against the RC owners.
@venkatashok
ಕೋವಿಡ್ 19 ರ ಮುಂಜಾಗ್ರತಾ ಕ್ರಮವಾಗಿ ನಗರ ಗಸ್ತಿನಲ್ಲಿ ಶೆಟ್ಟಿಹಳ್ಳಿ ಗೇಟ್ ಬಳಿ ಡ್ರೋನ್ ಕ್ಯಾಮರಾ ದಿಂದ ಸಂಚಾರದ ಮಾಹಿತಿ ಪಡೆದು ಅನಾವಶ್ಯಕ ವಾಗಿ ವಾಹನದಲ್ಲಿ ತಿರುಗಾಡುತ್ತಿದ್ದವರ ವಿಚಾರಣೆ , ನಂತರ ಶೆಟ್ಟಿಹಳ್ಳಿ ರಸ್ತೆ ಬದಿಯಲ್ಲಿನ ತರಕಾರಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ನೀಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಗೃಹ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಿಂದ ತುಮಕೂರು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಹುಳಿಯಾರು ಪೊಲೀಸ್ ಠಾಣೆಯ ಕಟ್ಟಡದ ಉದ್ಘಾಟನೆ.
#huliyarps