ನನ್ನ ಮಗಳು ಡಾ. ದಿಶಾ ಕೋವಿಡ್ ಡ್ಯೂಟಿಯಲ್ಲಿದ್ದಾಳೆ.
ಕೋವಿಡ್ ಡ್ಯೂಟಿಯಲ್ಲಿರುವ ದಿಶಾ ಕಳೆದ ಮೂರು ದಿನದಿಂದ ತನ್ನ ಒಂದು ವರ್ಷದ ಮಗನನ್ನು ನೋಡಿರಲಿಲ್ಲ.
ನಮ್ಮ ಮನೆಯಲ್ಲಿ ಅಜ್ಜಿಯ (ನನ್ನ ಮಡದಿ ಸಾವಿತ್ರಿಯ) ತೋಳಿನಲ್ಲಿರುವ ಮಗು ವಿಕ್ರಾಂತ ನನ್ನು ದೂರದಿಂದಲೇ ನೋಡಿ ನನ್ನ ಮಗಳು ಆನಂದಿಸಿ ಹೋಗುವಾಗ ಆದರೆ ನಮ್ಮ ಹೃದಯ ಕಲಕಿದ ಕ್ಷಣ.
ಬಂಟ್ವಾಳ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ���ಮರ್ಥಿಸುತ್ತಾರೆ.
Just loved this statement from the AIIMS doctor ...
*." This virus (Corona Virus) has a very big ego, he will not come to your house unless you go out and invite him"*
👌🏻
ಈ ರಾತ್ರಿಗೆ ಒಂದು ವರ್ಷವಾಯಿತು, ಮಾನ್ಯ ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ ಮರುದಿನ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದ್ದಕ್ಕೆ. ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಧನ್ಯವಾದಗಳು.
@BSYBJP
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಲಿಂಗಂಪಲ್ಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ರಾಘವೇಂದ್ರ ಕುಲಕರ್ಣಿಯವರು ವರ್ಗಾವಣೆಯಾದಾಗ
ಶಾಲಾ ಮಕ್ಕಳು ಹಾಗೂ ಸಹೋದ್ಯೋಗಿಗಳ ಕಣ್ಣೀರ ಧಾರೆಯ ಭಾವಪೂರ್ಣ ಬೀಳ್ಕೊಡುಗೆಯ ಈ ವಿಡಿಯೋ ನನಗೆ ವಾಟ್ಸಪ್ ಮೂಲಕ ದೊರಕಿತು.
ಧನ್ಯೋಸ್ಮಿ... 🙏🙏🙏
ಕೆಎಸ್ಆರ್ ಟಿ ಸಿ ಗೆ
₹ 1 ಕೋಟಿ ಚೆಕ್ ಕೊಡ ಬಂದ ನಾಯಕರುಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಚೆಕ್ಕನ್ನು ಸ್ವೀಕರಿಸಲು ನಿರಾಕರಿಸಿ ಆ ಚೆಕ್ಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಬಹುದು ಎಂದು ವಿನಮ್ರವಾಗಿ ಹೇಳಿರುವುದು ಅತ್ಯಂತ ಶ್ಲಾಘನೀಯ.
ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಮಾಹಿತಿ.
ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ.
ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು.
ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ.
ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಪ್ರೀತಿಯ SSLC ಮಕ್ಕಳೇ.
ನಿಮಗೆಲ್ಲಾ ಶುಭಾಶಯಗಳು.
ಧೈರ್ಯದಿಂದ ನಮ್ಮ ಪರೀಕ್ಷಾ ಕೇಂದ್ರಕ್ಕೆ ಬನ್ನಿ.
ಅದು ಕೇವಲ ನಿಮ್ಮ ಪರೀಕ್ಷಾ ಕೇಂದ್ರವಲ್ಲ,
ಅದು ನಿಮ್ಮೆಲ್ಲರ #ಸುರಕ್ಷಾ_ಕೇಂದ್ರ ಸಹ.
ಯಾವುದೇ ಆತಂಕ ಬೇಡ. ಲವಲೇಶ ಭಯವೂ ಬೇಡ.
ಬದಲಿಗೆ ಆತ್ಮವಿಶ್ವಾಸ ತುಂಬಿರಲಿ.
ನಿಮಗೆಲ್ಲಾ ಒಳ್ಳೆಯದಾಗಲಿ.
ವಿಧಾನಸೌಧದ ಪಾರ್ಕಿಂಗ್ ಪ್ರದೇಶದಲ್ಲಿ ತನ್ಮಯತೆಯಿಂದ ಕಸ ಗುಡಿಸಿ, ಕಸವನ್ನು ಸಂಗ್ರಹಿಸಿ, ರವಾನೆ ಮಾಡುವ ಕಾಯಕದಲ್ಲಿ ತೊಡಗಿದ್ದ ಯಾದಗಿರಿಯ ಗುರುರಾಜ ರನ್ನು ಮಾತನಾಡಿಸಿದೆ.
ಯಾವ ಮೇಲಧಿಕಾರಿಯೂ ನೋಡದೇ ಇದ್ದರೂ ತನ್ನ ಕೆಲಸ ಶ್ರದ್ಧೆಯಿಂದ ಮಾಡುತ್ತಿದ್ದ ಈ ಗುರುರಾಜ ನನ್ನ ಅಭಿನಂದನೆ.
ಕುಮಾರಸ್ವಾಮಿಯವರೇ,
ನೆರೆ ಬಂದಾಗ ಸರಕಾರದ ನೆರವಿಲ್ಲದೆ ಪರಿಹಾರ ಕಾರ್ಯ ಮಾಡುವುದು, ಕೆರೆ-ಕಲ್ಯಾಣಿ ಸ್ವಚ್ಛತೆ ಮಾಡಿ ಪರಿಸರದ ಕುರಿತು ಅರಿವು ಮೂಡಿಸುವುದು, ಕುಗ್ರಾಮಗಳಲ್ಲಿ ಕನಿಷ್ಟ ಸೌಕರ್ಯ ಒದಗಿಸುವುದು...ಇವು ದೇಶಭಕ್ತಿ ಕಾರ್ಯಗಳೆಂದಾದರೆ ಚಕ್ರವರ್ತಿ ಸೂಲಿಬೆಲೆ ನಂ ೧ ದೇಶಭಕ್ತ.
ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ 2 ನೇ PUC ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ.
ಈಗಾಗಲೇ ತಿಳಿಸಿರುವಂತೆ ಎರಡನೇ ಪಿಯುಸಿ ಫಲಿತಾಂಶ ಜುಲೈ 20 ರ ಸುಮಾರಿಗೆ ಬರಲಿದೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ.
ನಮ್ಮ ಪ್ರೀತಿಯ ಮಗಳ Paediatrics ವಿಭಾಗದಲ್ಲಿ ಎಂಡಿ ಪರೀಕ್ಷೆಯ ಫಲಿತಾಂಶ ಇಂದು ಬಂದಿದೆ.
ಇನ್ನು ಮುಂದೆ ಅವಳು
"Dr Disha.S.Kumar MBBS, MD".
ಅವಳು ಪಟ್ಟ ಪರಿಶ್ರಮ ಫಲಿತಾಂಶ ನೀಡಿದೆ.
Hearty Congratulations our Dear Disha.
ಬಿಜೆಪಿ ಸಾರ್ವಜನಿಕ ಸಭೆಯಿಂದ ವಾಪಸ್ಸು ನಡೆದು ಬರುತ್ತಿದ್ದಾಗ ತಮ್ಮಮನೆಯಾಚೆ ತಳ್ಳುವ ಗಾಡಿಯ ಮೇಲೆ ಕುಳಿತು ಖುಷಿಯಾಗಿ ಬರೆಯುತ್ತಿದ್ದ ಶರಣ್ಯ, ದಿವ್ಯ ಮತ್ತು ಚಿತ್ರ ಸಿಕ್ಕಿದ್ದರು.
ತಳ್ಳಿಕೊಂಡು ಹೋಗಿ ಬಿಡ್ಲಾ ಎಂದು ಕೇಳಿದ್ದಕ್ಕೆ "ನಮ್ಮಪ್ಪ ಗಾಡಿಗೆ ಬೀಗ ಹಾಕಿದ್ದಾರೆ" ಎಂದು ಬೀಗಿದರು.
18 ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಬರೆದಿದ್ದ ಬೆಂಗಳೂರಿನ ಓರ್ವ ವಿದ್ಯಾರ್ಥಿನಿಯ ಆರೋಗ್ಯ ಕುರಿತು ಕೆಲ ಗೊಂದಲ ನಿರ್ಮಾಣವಾಗಿತ್ತು. ಆ ವಿದ್ಯಾರ್ಥಿನಿಯ ಸ್ಯಾಂಪಲ್ Negative ಎಂದು ಫಲಿತಾಂಶ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಯಾವುದೇ ಆತಂಕಕ್ಕೆ ಆಸ್ಪದೆವಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ನಲ್ಲಿ ಶಾಲೆಯೊಂದರಲ್ಲಿ ಪದವೊಂದನ್ನು ಉಚ್ಛರಿಸಲು ಕಷ್ಟಪಡುತ್ತಿರುವ ಮಗುವಿನ ಆತಂಕದ ಮುಖವನ್ನು ಗಮನಿಸಿ ಈ ಪತ್ರ ಬರೆದಿದ್ದೇನೆ.
Karnataka Govt has decided to stop all On-line classes for LKG, UKG & classes up to 5th std.
To extend this up to 7th std is only a suggestion from few cabinet ministers as expressed in an informal discussion and NOT a decision.
ಕೋವಿಡ್ 19 ಧೃಢ ಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ನಾನು ಇನ್ನು ಕೆಲವು ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುತ್ತೇನೆ.
ಯಾವುದೇ ಲಕ್ಷಣವಿಲ್ಲದಿರುವುದರಿಂದ ಯಾವುದೇ ರೀತಿ ಆತಂಕ ವಿಲ್ಲ.
ಸಂಗೀತ ಎಂಬ ಈ ಬಾಲಕಿ ಕೆಂಗೇರಿ ರೈಲ್ವೇ ನಿಲ್ದಾಣದ ಬಳಿ ಹೂವು ಮಾರುತ್ತಿದ್ದಳು.
ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಆಕೆಯ ಪೋಷಕರ ಮನ ಒಪ್ಪಿಸಿ ಸಂಗೀತ ಳನ್ನು ರಾಮನಗರದ ಮೊರಾರ್ಜೀ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಸಜ್ಜಾಗಿದ್ದಾರೆ.
ಇಂತಹ ಇನ್ನೂ ಅನೇಕ ಬಾಲ ಕಾರ್ಮಿಕರಿಗೆ ಶಿಕ್ಷಣ ಕೊಡಿಸುವ ಯೋಜನೆ ನಮ್ಮ ಇಲಾಖೆಯದ್ದು.
ಕೆಎಸ್ಆರ್ ಟಿ ಸಿ ಬಸ್ ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಹೆಮ್ಮೆಯ ಎಲ್ಲಾ ಮಕ್ಕಳಿಗೆ ಶುಭ ಹಾರೈಕೆಗಳು.
ಮಕ್ಕಳೆಲ್ಲರೂ ಶಾಂತಚಿತ್ತರಾಗಿ, ನಿರಾತಂಕವಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.
ತಾನು ಉಳಿಸಿದ್ದ ಪಾಕೆಟ್ ಮನಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹1 ಲಕ್ಷ ನೀಡಿರುವ ಬಿಎಂಎಸ್ ಕಾಲೇಜು ವಿದ್ಯಾರ್ಥಿನಿ ಅಮೂಲ್ಯರ ಕೊಡುಗೆ ಅತ್ಯಂತ ಅಮೂಲ್ಯ.
ಸಮಾಜಮುಖಿ ಚಿಂತನೆಯ ಅಮೂಲ್ಯರಿಗೆ ಧನ್ಯವಾದಗಳು.
ನಮ್ಮ ರಾಜ್ಯದ SSLC ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು
21.6.2021 ರಿಂದ, ಅಂದರೆ ಜೂನ್ 21 ರಿಂದ.
ಆದ್ದರಿಂದ ನಮ್ಮ ರಾಜ್ಯದಲ್ಲಿ CBSE ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ನಾಳೆ ಸೋಮವಾರ, 26.8.2019 ಬೆಳಿಗ್ಗೆ 11.30 ಗಂಟೆಯಿಂದ ನನಗೆ ವಿಧಾನಸೌಧದಲ್ಲಿ ನೀಡಿರುವ ಕೊಠಡಿ ಸಂಖ್ಯೆ 262 ರಲ್ಲಿ ನನ್ನ ಕಾರ್ಯ ಪ್ರಾರಂಭಿಸುತ್ತಿದ್ದೇನೆ.
ತಮ್ಮೆಲ್ಲರ ಆಶೀರ್ವಾದವಿರಲಿ.
ತಾನು ಮೂಢನಂಬಿಕೆಯ ವಿರುದ್ಧ ಇದ್ದೇನೆ ಎಂದು ರುಜುವಾತು ಮಾಡಲು ಮಾಜಿ ಸಚಿವ ಶ್ರೀ ಸತೀಶ್ ಜಾರಕಿಹೋಳಿಯವರು ತನ್ನ ಹೊಸ ಕಾರಿಗೆ ಸ್ಮಶಾನದಲ್ಲಿಯೇ ಚಾಲನೆ ಕೊಡುತ್ತಿರುವುದೂ ಮೂಢನಂಬಿಕೆಯಲ್ಲವೇ?
ಧಾರವಾಡಕ್ಕೆ ನನ್ನ ಇಲಾಖೆಯ ಕಾರ್ಯಾಗಾರದ ನಿಮಿತ್ತ ಹೊರಟಿದ್ದೆ. ದಾರಿಯ ಪಕ್ಕದಲ್ಲಿ ಈ "#ಅನ್ನದಾತ" ಕಣ್ಣಿಗೆ ಬಿದ್ದರು.
ನೆಲೋಗಲ್ ಗ್ರಾಮದ ರೈತ ಚನ್ನಬಸನಗೌಡ ಹೊಂಬರಡಿ ಯವರಿಗೆ "ರೈತರ ದಿನ" ದಂದು ಗೌರವ ಸಲ್ಲಿಸಿ ಮುಂದಕ್ಕೆ ಹೊರಟೆ.
ಹೊಟೆಲೊಂದಕ್ಕೆ ಊಟ ಮಾಡಲು ಪ್ರವೇಶಿಸುವಾಗ 2013-2016 ರವರೆಗೆ ಶಿಕ್ಷಣ ಸಚಿವರಾಗಿದ್ದ ಶ್ರೀ ಕಿಮ್ಮನೆ ರತ್ನಾಕರ್ ಸಿಕ್ಕಿದರು.
ನಿಂತಲ್ಲೇ ಸುಮಾರು 15-20 ನಿಮಿಷಗಳ ಕಾಲ ಅವರ ಅನುಭವದ ಹಿನ್ನೆಲೆಯಲ್ಲಿ ಇಲಾಖೆಯ ಕುರಿತು ಕೆಲ ವಿಚಾರ ತಿಳಿಸಿದರು.
ಅತ್ಯಂತ ಉಪಯುಕ್ತ ಸಲಹೆಗಳು ಸಿಕ್ಕಿದವು. ಸಂತಸವಾಯಿತು.
ಕರ್ನಾಟಕದಲ್ಲಿ ಓದುತ್ತಿರುವ ಕೇರಳ ರಾಜ್ಯದ ಗಡಿಗ್ರಾಮಗಳಿಂದ 367 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕುಳಿತಿದ್ದಾರೆ.
ಎಲ್ಲಾ 367 ಮಕ್ಕಳೂ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ.
ಅವರನ್ನು ತಲಪಾಡಿ ಚೆಕ್ ಪೋಸ್ಟ್ ನಿಂದ ಬಸ್ ನಲ್ಲಿ ಕರೆತರುತ್ತಿರುವ ದೃಶ್ಯ.
ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ (DC, CEO & SP) ಕೊಡಗಿನಲ್ಲಿ ನಡೆದ ಮಹಿಳಾ ದಸರಾದಲ್ಲಿ ಭಾಗವಹಿಸಿದ್ದು ಹೀಗೆ ವಿಶಿಷ್ಟವಾಗಿ.
ತಾವು ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಜನ-ಸಂಸ್ಕೃತಿಯೊಂದಿಗೆ ಬೆರೆಯುವ ರೀತಿ ಇದು.
ಈ ಮೂರೂ ಅಧಿಕಾರಿಗಳಿಗೆ ಅಭಿನಂದನೆಗಳು.
ತಮಗೆ ಆಗಬಹುದಾದ ಅಪಾಯವನ್ನು ಲೆಕ್ಕಿಸದೆ #ಕರೋನಾ_ವೈರಸ್ ಆತಂಕ ಎದುರಾಗಿರುವ #ವುಹಾನ್ ನಿಂದ ಭಾರತೀಯರನ್ನು ಕರೆತರಲು ಹೋಗಿರುವ Air India ಸಿಬ್ಬಂದಿಗೆ ನಮ್ಮದೊಂದು ಮೆಚ್ಚುಗೆ ಇರಲಿ.
ಅಂದು ಸುಷ್ಮಾ ಸ್ವರಾಜ್ ಹೇಳಿದ ಮಾತು : "ಭಾರತೀಯರು ಮಂಗಳ ಗ್ರಹದಲ್ಲಾದರೂ ಇರಲಿ. ಅವರನ್ನು ಹುಷಾರಾಗಿ ಕರೆತರುವ ಜವಾಬ್ದಾರಿ ನಮ್ಮದು" ಎಂದು.
ಸಾರ್ವಜನಿಕರ ಹಿತಕ್ಕಾಗಿ ಬಸ್ ಓಡಿಸಲು ಸೇವೆಗೆ ಹಾಜರಾದ ಸಾರಿಗೆ ಇಲಾಖೆಯ ಚಾಲಕ ರೊಬ್ಬರನ್ನು ಮುಷ್ಕರ ನಿರತ ಸಾರಿಗೆ ಇಲಾಖೆಯ ಅವರ ಸ್ನೇಹಿತರೇ ಕಲ್ಲು ಹೊಡೆದು ಸಾಯಿಸಿದ ಘಟನೆ ಅತ್ಯಂತ ಹೇಯಕರ.
ಈಗ ತಾನೆ ಸುಪ್ರಸಿದ್ಧ PES ಶಿಕ್ಷಣ ಸಂಸ್ಥೆಯ (PESIT) ಶ್ರೀ ದೊರೆಸ್ವಾಮಿಯವರು ಕರೆಮಾಡಿ "ರಾಜ್ಯದಲ್ಲಿ ನೆರೆಹಾವಳಿಗೆ ತುತ್ತಾಗಿ ಸಂಪೂರ್ಣ ಹಾಳಾಗಿರುವ 10 ಶಾಲಾ ಕಟ್ಟಡಗಳನ್ನು ನಮ್ಮ PESIT ನಿಂದ ಸಂಪೂರ್ಣವಾಗಿ ಪುನರ್ನಿರ್ಮಾಣ ಮಾಡಿಕೊಡುತ್ತೇವೆ" ಎಂದು ತಿಳಿಸಿದ್ದಾರೆ.
ಅವರ ಈ ಔದಾರ್ಯಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
Visited BIEA near NICE Road (Tumkur Road) where 10,100 bed COVID Hospital is coming up.
Work is progressing very fast & it will be the largest COVID hospital in the Country.
ಕಳೆದ ಸೋಮವಾರದಿಂದ ನಾನು ಕೋವಿಡ್ 19 ವೈರಸ್ ಪೀಡಿತನಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ.
ವೈದ್ಯರ ಸಲಹೆ ಮೇರೆಗೆ ನಾನು ಈಗ ಬೆಂಗಳೂರಿನಲ್ಲಿಯೇ ಗೆಳೆಯರೊಬ್ಬರ ಚಿಕ್ಕ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದೇನೆ. ವೈದ್ಯರ ನಿಗಾದಲ್ಲಿದ್ದೇನೆ.
ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಿಂದಲೂ ನನ್ನ ಆರೋಗ್ಯ ಸುಧಾರಿಸುತ್ತಿದೆ.
ನನಗೆ ಜನ್ಮ ಕೊಟ್ಟ, ನನ್ನನ್ನು ಪಾಲಿಸಿ ಪೋಷಿಸಿ ಬೆಳೆಸಿ ಈ ಮಟ್ಟಕ್ಕೆ ತಂದ ನನ್ನಮ್ಮನ ಜನುಮದಿನ ಇಂದು.
ಇಂದು ಬೆಳಗ್ಗೆ ಅವರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಬಂದೆ.
My sincerest thanks to CM Sri
@BSYBJP
for his constant encouragement for conducting SSLC exams & to all my Cabinet colleagues for flawless supervision in their dists.
Many students are calling me to know whether Second PUC results will be announced Today.
I once again inform all that Second PUC results will come out around 20th July.