This is the official Twitter account of Superintendent of Police ,Mysuru District.|RpT is not acknowledgement| Call 112 for emergencies, Not monitored 24×7.
DSB ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ CHC 324 ಶ್ರೀ.ಕುಮಾರ ಸ್ವಾಮಿ ರವರು ಕರ್ನಾಟಕ ವಿಧಾನಸಭಾ ಚುನಾವಣೆ 2023 ಸಂಬಂಧ police security deployment plan & ಚುನಾವಣಾ ಕರ್ತವ್ಯಗಳನ್ನು ಉತ್ತಮವಾಗಿ ನಿರ್ವಹಿಸಿದ್ದು ಸದರಿಯವರನ್ನು
#spmys
ರವರಾದ #ಸೀಮಾಲಾಟ್ಕರ್ ಐಪಿಎಸ್ ರವರು "Cop Of the Month" ಎಂದು ಶ್ಲಾಘಿಸಿರುತ್ತಾರೆ.
T.N ಪುರ ಪಟ್ಟಣದಲ್ಲಿ ಕೋವಿಡ್ -19 ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ ರಸ್ತೆಯಲ್ಲಿ ಸಿಕ್ಕ ಸುಮಾರು 50 ಸಾವಿರ ರೂ ಹಣವನ್ನು ಠಾಣೆಗೆ ತಂದು ನೀಡಿ ಅದನ್ನು ವಾರಸುದಾರರಿಗೆ ಹಿಂದಿರುಗಿಸಿದ T.N.ಪುರ ಠಾಣೆಯ ಚಾಲಕ ಶ್ರೀ.ದಯಾನಂದ್ ರವರಿಗೆ ಸದರಿಯವರ ಪ್ರಾಮಾಣಿಕ ಕೆಲಸವನ್ನು ಪ್ರಶಂಸಿಸಿ 05 ಸಾವಿರ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಕೋವಿಡ್ ಸೋಂಕಿಗೊಳಪಟ್ಟು ಚಿಕಿತ್ಸೆ ಪಡೆಯುತ್ತಿರುವ ಅಧಿಕಾರಿ ಸಿಬ್ಬಂದಿಗಳೊಡನೆ NH ನ ಡಾ.ನಂದ & ಚಿತ್ರನಟ ಗೋಲ್ಡನ್ ಸ್ಟಾರ್
@Official_Ganesh
ರವರು VC ಮೂಲಕ ಮಾತನಾಡಿ ನಮ್ಮೆಲ್ಲಾ ಪೊಲೀಸರಿಗೆ ಧನ್ಯವಾದ ತಿಳಿಸಿ,ಬೇಗ ಗುಣ ಮುಖರಾಗುವಂತೆ ಹಾರೈಸಿ, ಅಂಜಿಕೆಗೆ ಒಳಗಾಗಬಾರದೆಂದು ಹೇಳಿದರು.
@DgpKarnataka
@IGP_SR_Mysuru
@RyshyanthIPS
Kudos to Ms Bindiu Mani, daughter of Shri Nagraj , RHC , working in 3rd Bn for securing 468 th Rank. As of now she may get IPS though she wants to take another shot. Proud moment for Karnataka Police Force and an inspiring story for many.
@Chethan_R
@IGP_SR_Mysuru
@alokkumar6994
ಲೋಕಸಭಾ ಚುನಾವಣೆ ಸಂಬಂಧ ಈ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಮತದಾನ ಮಾಡಿ ನಾಡಿನ ಸಮಸ್ತ ನಾಗರೀಕರು ಮತದಾನ ನೀಡುವಂತೆ ಕರೆ ನೀಡಿದರು.
@Rangepol_SR
#LokSabhaElections2024
ದಿನಾಂಕ.14.08.1992 ರಂದು ಮೀಣ್ಯಂ ನಲ್ಲಿ ವೀರಪ್ಪನ್ ದಾಳಿಗೆ ಒಳಗಾಗಿ ಹುತಾತ್ಮರಾದ ಅಂದಿನ ಅವಿಭಜಿತ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಟಿ.ಹರಿಕೃಷ್ಣ,ಐಪಿಎಸ್ ಮತ್ತು ಪಿಎಸ್ಐ ಶ್ರೀ.ಶಖೀಲ್ ಅಹಮ್ಮದ್ ರವರು ಹಾಗೂ ಈ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳನ್ನು ಗೌರವ ಪೂರ್ವಕವಾಗಿ ಸ್ಮರಿಸೋಣ.
@Chethan_R
@IGP_SR_Mysuru
ಮಾನ್ಯ ಕಾನೂನು ಮತ್ತು ಸುವ್ಯವಸ್ಥೆ ADGP ರವರಾದ
@alokkumar6994
ರವರಿಂದು ಮೈಸೂರು ದಕ್ಷಿಣ ವಲಯದ ಜಿಲ್ಲಾ ಪೊಲೀಸ್ ಘಟಕಗಳ ಮತ್ತು ನಗರ ಘಟಕದ ಪರಾಮರ್ಶನ ಸಭೆ ನಡೆಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ
@Chethan_R
ರವರು ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಟಿ.ನರಸೀಪುರದಲ್ಲಿ ತಮಗೆ ಸಿಕ್ಕ ಐವತ್ತು ಸಾವಿರ ರೂ ಹಣವನ್ನು ವಾರಸುದಾರರಿಗೆ ಮರಳಿಸಿದ ಟಿ.ನರಸೀಪುರ ಪೊಲೀಸ್ ಠಾಣಾ ಇಲಾಖಾ ಜೀಪ್ ಚಾಲಕ ದಯಾನಂದ್ ರವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಐದು ಸಾವಿರ ರೂ ನಗದು ಬಹುಮಾನ ನೀಡಿ ಸದರಿಯವರ ಪ್ರಾಮಾಣಿಕತೆಯನ್ನು ಪ್ರಶಂಸಿಸಿದರು.
ಜಿಲ್ಲಾ ಪೊಲೀಸ್ ಕಛೇರಿ DCRB ಶಾಖೆಯ CHC- 243 ಶ್ರೀ.ಮಹಮ್ಮದ್ ರಫೀ ರವರು ಠಾಣೆಗಳಿಂದ ಸೂಕ್ತ ಮಾಹಿತಿ ಸ್ವೀಕರಿಸಿ ಖಡತಗಳ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದು ಸದರಿಯವರನ್ನು "Cop Of The Month" ಎಂದು
#spmysuru
ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಶ್ಲಾಘಿಸಿ ಪ್ರಶಂಸನಾ ಪತ್ರ ನೀಡಿರುತ್ತಾರೆ.
@IGP_SR_Mysuru
#NgudtrafficPS
ನ ನ್ಯಾಯಾಲಯ ಸಿಬ್ಬಂದಿಯವರಾದ ಶ್ರೀಮತಿ.ಪವಿತ್ರ , WHC 126 ರವರು ಪ್ರಕರಣಗಳನ್ನು ವಿಲೇ ಮಾಡುವಲ್ಲಿ ಅತ್ಯುತ್ತಮ ನ್ಯಾಯಾಲಯ ಕರ್ತವ್ಯವನ್ನು ನಿರ್ವಹಿಸಿದ್ದು ಸದರಿಯವರನ್ನು ಫೆಬ್ರವರಿ ಮಾಹೆಯ ಪೊಲೀಸ್ (Cop Of The Month) ಎಂದು
#Spmysuru
ರವರಾದ #ಸೀಮಾಲಾಟ್ಕರ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.
@IGP_SR_Mysuru
ನಿಮ್ಮ ಮನೆಯಲ್ಲಿ ಕ್ಷೇಮವಾಗಿರಿ ಕೊರೋನಾ ವಿರುದ್ದ ಹೋರಾಡಲು ನಮಗೆ ಸಹಕರಿಸಿ ಅನಗತ್ಯ ಉದಾಸೀನ ಸಲ್ಲದು ಅಂತವರ ವಿರುದ್ದ ಕಾನೂನಿನ ಕ್ರಮ ಜರುಗಿಸಲಾಗುವುದು.#ಲಾಕ್ ಡೌನ್
#stay
@home
#fightagainstcorona
ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಕರ್ತವ್ಯ ನಿರ್ವಹಿಸಿ ನಿವೃತ್ತರಾದ PSI ಶ್ರೀ.ಅಬ್ದುಲ್ ಕರೀಂ, ASI ಶ್ರೀ. ಕೃಷ್ಣೇಗೌಡರವರನ್ನು ಕುಟುಂಬ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಆತ್ಮೀಯವಾಗಿ ಬೀಳ್ಕೊಟ್ಟರು.
@IGP_SR_Mysuru
@AddlSPmysuru
ದಿನಾಂಕ.31.03.2023 ರಂದು ಕರ್ತವ್ಯದಿಂದ ವಯೋನಿವೃತ್ತಿ ಹೊಂದಿದ ASI ಶ್ರೀ.ಶೈಲೇಂದ್ರ ಕುಮಾರ್ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಆತ್ಮೀಯವಾಗಿ ಬೀಳ್ಕೊಟ್ಟು ಶುಭ ಕೋರಿದರು. ಅಪರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ.ಬಿ.ಎನ್ ರವರು ಹಾಜರಿದ್ದರು.
@IGP_SR_Mysuru
@AddlSPmysuru
#CEIR
Portal ಮೂಲಕ PI CEN ಠಾಣೆ & ಸಿಬ್ಬಂದಿಗಳ ತಂಡವು ಕಳುವಾಗಿದ್ದ 2️⃣ 📱ಗಳನ್ನು ಪತ್ತೆ ಹಚ್ಚಿದ್ದು, ಮಾಲೀಕರಿಗೆ ಹಿಂದಿರುಗಿಸಲಾಯಿತು. ಮೊಬೈಲ್ ಕಳೆದುಹೋದಲ್ಲಿ/ ಕಳ್ಳತನವಾದಲ್ಲಿ
#CEIR
Portal ಗೆ ಲಾಗಿನ್ ಆಗಿ ದೂರನ್ನು ವರದಿ ಮಾಡಲು ಕೋರಿದೆ.
@DgpKarnataka
@IGP_SR_Mysuru
.
ಕೋವಿಡ್ 19 ರ ಸಂದಿಗ್ಧ ಸಮಯದಲ್ಲಿ ಕರ್ತವ್ಯದ ಜೊತೆಗೆ ಬಡ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಬೆಂಗಳೂರು ನಗರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ಪಿಎಸ್ಐ ಶ್ರೀ.ಶಾಂತಪ್ಪ ಜಡೆಮ್ಮನವರ್ ರವರನ್ನು ಜಿಪೋಅ ರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಹೃತ್ಪೂರ್ವಕವಾಗಿ ಸನ್ಮಾನಿಸಿ, ಇಲಾಖೆಗೆ ಪ್ರಶಂಸೆ ತರುವ ಅವರ ಈ ಕಾರ್ಯವನ್ನು ಶ್ಲಾಘಿಸಿದರು
ಜಿಲ್ಲಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ARSI ಶ್ರೀ. ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಿಪಿಸಿ 01 ಶ್ರೀ .ವೆಂಕಟೇಶ್ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್, ಐಪಿಎಸ್ ರವರು ಆತ್ಮೀಯವಾಗಿ ಬೀಳ್ಕೊಟ್ಟರು.
@Seemalatkar_IPS
@IGP_SR_Mysuru
@112Mysuru
ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಆಚರಣೆ ಅಂಗವಾಗಿ ಜಿಲ್ಲಾ ಪೊಲೀಸ್ ವತಿಯಿಂದ ಮಾಡಿಕೊಳ್ಳಲಾಗುತ್ತಿರುವ ವಿನೂತನ ಪೂರ್ವ ಸಿದ್ದತೆಗಳು. ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಅಧಿಕಾರಿ ಸಿಬ್ಬಂದಿಗಳಿಗೆ ತ್ರಿವರ್ಣ ಧ್ವಜವನ್ನು ಜಿಪೊಅ ರಾದ
@Chethan_R
ರವರು ವಿತರಿಸಿದರು.
@alokkumar6994
@IGP_SR_Mysuru
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್ ಆರ್ ಐಪಿಎಸ್ ರವರಿಂದು ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ನಡೆದ ವಾರದ ಕವಾಯತ್ತಿನಲ್ಲಿ ಗೌರವ ವಂದನೆ ಸ್ವೀಕರಿಸಿ , ಸಿಬ್ಬಂದಿಗಳ ಕುಂದುಕೊರತೆ ಆಲಿಸಿದರು.
@Chethan_R
@IGP_SR_Mysuru
@112Mysuru
ಮಾನ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ರವರಾದ ಶ್ರೀ.ಹಿತೇಂದ್ರ .ಆರ್.ಐಪಿಎಸ್ ರವರಿಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಪರಾಧ ಪರಾಮರ್ಶನ ಸಭೆಯನ್ನು ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು.
@DgpKarnataka
@KarnatakaCops
@Rangepol_SR
#MysuruDistrictPolice
ಘಟಕದಲ್ಲಿ ಪ್ರಥಮ ಬಾರಿಗೆ Ngud S/D ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿ & ಸಿಬ್ಬಂದಿಗಳು ದಿನಾಂಕ. 24/25 ರ ರಾತ್ರಿ ಗಸ್ತು ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಗಸ್ತಿನ ಪರಿಶೀಲನೆಯನ್ನು ಮಹಿಳಾ ASI/PSI ಗಳು ಮಾಡಿದ್ದು, Prob.Dysp ರವರು ಉಸ್ತುವಾರಿ ಅಧಿಕಾರಿಯಾಗಿರುತ್ತಾರೆ
@DgpKarnataka
ಮಾನ್ಯ
@DgpKarnataka
@Copsview
ರವರಿಂದು ಮೈಸೂರು ನಗರದ ನೂತನ CEN ಪೊಲೀಸ್ ಠಾಣೆ ಉದ್ಗಾಟಿಸಿದರು. ನಗರದ ಪೊಲೀಸ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಪಿಎ ನಿರ್ದೇಶಕರಾದ ಶ್ರೀ.ವಿಪುಲ್ ಕುಮಾರ್, ಐಪಿಎಸ್ ರವರು,
@IGP_SR_Mysuru
ರವರು ,
@CPMysuru
ರವರು , ಜಿ.ಪೊ.ಅ. ರಾದ ಶ್ರೀ
@Chethan_R
ಅವರು ಹಾಜರಿದ್ದರು.
ಅಕಾಲಿಕ ಮರಣಕ್ಕೀಡಾದ ಕನ್ನಡದ ಸುಪ್ರಸಿದ್ದ ನಟ ಶ್ರೀ.ಪುನೀತ್ ರಾಜಕುಮಾರ್ ರವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ. ಅವರ ಕುಟುಂಬಕ್ಕೆ , ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಅವರ ಸಾವಿನಿಂದ ನಮ್ಮ ಕನ್ನಡ ನಾಡಿಗೆ ,ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
@Chethan_R
@IGP_SR_Mysuru
ಮಾನ್ಯ ಕಾನೂನು ಮತ್ತು ಸುವ್ಯವಸ್ಥೆ ADGP ರವರಾದ ಶ್ರೀ.ಅಲೋಕ್ ಕುಮಾರ್, ಐಪಿಎಸ್ ರವರಿಂದು KSRP ಮೈದಾನದಲ್ಲಿ ನಡೆದ SPL RPC ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್ ಐಪಿಎಸ್ ರವರು ಸಹ ಪಾಲ್ಗೊಂಡರು.
@alokkumar6994
@Chethan_R
@IGP_SR_Mysuru
.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ .ಚೇತನ್.ಆರ್.ಐಪಿಎಸ್ ರವರಿಂದು ಇಲಾಖಾ ವತಿಯಿಂದ ಅಧಿಕಾರಿ ಸಿಬ್ಬಂದಿಗಳಿಗೆ ಹಂಚಿಕೆ ಆಗಿರುವ ದ್ವಿಚಕ್ರ ವಾಹನಗಳ ಪರಿವೀಕ್ಷಣೆಯನ್ನು ನಡೆಸಿದರು.
@Chethan_R
@IGP_SR_Mysuru
@112Mysuru
ಜಿಲ್ಲಾ ಪೊಲೀಸ್ ಕಛೆರಿಯ ಸಭಾಂಗಣದಲ್ಲಿಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಟಿ.ನರಸೀಪುರ ಪೊಲೀಸ್ ಠಾಣೆಯ ಮನೆಗಳ್ಳತನ ಪ್ರಕರಣ & ಸೆನ್ ಪೊಲೀಸ್ ಠಾಣೆಯ ಗಿಫ್ಟ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
@IGP_SR_Mysuru
@Seemalatkar_IPS
ಇಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ ಹುಣಸೂರು ಪಟ್ಟಣ ಪೊಲೀಸ್ ಠಾಣಾ ಎಎಸ್ಐ ನಾರಾಯಣಸ್ವಾಮಿ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್ .ಐಪಿಎಸ್ ರವರು ಜಿಲ್ಲಾ ಪೊಲೀಸ್ ಪರವಾಗಿ ಬೀಳ್ಕೊಟ್ಟು ಶುಭಕೋರಿದರು.
@Chethan_R
@IGP_SR_Mysuru
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್, ಐಪಿಎಸ್ ರವರು ಜಿಲ್ಲೆಯ ಎಲ್ಲಾ ಉಪವಿಭಾಗ, ವೃತ್ತ & ಪೊಲೀಸ್ ಠಾಣೆಗಳ ಅಧಿಕಾರಿಗಳ ಸಭೆ ನಡೆಸಿದರು. ಮಹಿಳೆ & ಮಕ್ಕಳ ಹಕ್ಕುಗಳ ರಕ್ಷಣೆ, ಅಪರಾಧ ಪ್ರಕರಣಗಳ ಕುರಿತಾಗಿ ಸೂಚನೆ ನೀಡಿದರು.
@IGP_SR_Mysuru
@Seemalatkar_IPS
@112Mysuru
KL-ವೈನಾಡುನಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಟ್ರಕ್ ಡ್ರೈವರ್ ನ ಪ್ರಾಥಮಿಕ ಸಂಪರ್ಕದಲ್ಲಿದ್ದ H.D.KOTEಯ 10 & K.R.NAGAR ದ 6 ಜನರಿಗೆ ಕೋವಿಡ್ -19 ರ ಪರೀಕ್ಷೆ ಮಾಡಿದ್ದು,ಅವರೆಲ್ಲರಿಗೂ ಸೋಂಕು ಇಲ್ಲದಿರುವುದಾಗಿ ವರದಿ ಬಂದಿರುತ್ತದೆ.ಈ ತಾಲ್ಲೋಕುಗಳ ಜನತೆ ಯಾವುದೇ ಆತಂಕಕ್ಕೆ ಒಳಗಾಗದಿರಿ .
Only 08 active cases in Mysuru dist
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ , ಐಪಿಎಸ್ ರವರಿಂದು ಜ್ಯೋತಿ ನಗರದ ಡಿಎಆರ್ ಮೈದಾನದಲ್ಲಿ ನಡೆದ ಕವಾಯತ್ತಿನಲ್ಲಿ ಗೌರವ ವಂದನೆ ಸ್ವೀಕರಿಸಿ, ಕವಾಯತ್ತಿನ ಪರಿವೀಕ್ಷಣೆ ನಡೆಸಿದರು.
@IGP_SR_Mysuru
@Seemalatkar_IPS
ನೂತನ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮ ಲಾಟ್ಕರ್ ,ಐಪಿಎಸ್ ರವರು ಜಿಲ್ಲೆಯ ಹಿರಿಯ ಕಿರಿಯ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ತಂತ್ರಜ್ಞಾನದ ಬಳಕೆ ಅಧಿಕಗೊಳಿಸಲು, L&O ಕಾಪಾಡಲು, ಸೂಕ್ತ ರೀತಿಯಲ್ಲಿ ನೂತನ ಗಸ್ತು ಪದ್ದತಿಯನ್ನು ಜಾರಿಗೊಳಿಸಲು ಸೂಚಿಸಿದರು.
@IGP_SR_Mysuru
@Seemalatkar_IPS
ಇಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ ARSI ಶ್ರೀ.ರೇಣುಕಯ್ಯ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರು ಬೀಳ್ಕೊಟ್ಟರು. ಅಪರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ.ಬಿ.ಎನ್ ರವರು, AAO ಶ್ರೀಮತಿ.ಲಕ್ಷ್ಮೀ ರವರು ಹಾಜರಿದ್ದರು.
@Chethan_R
@IGP_SR_Mysuru
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್. ಆರ್.ಐಪಿಎಸ್ ರವರಿಂದು ಉನ್ನತ್ತಿಕರಿಸಿದ ಅಂತರಸಂತೆ ಪೊಲೀಸ್ ಠಾಣೆಯನ್ನು ಉದ್ಘಾಟನೆ ಮಾಡಿದರು.
SP Mysuru Sri Chethan R IPS today inaugurated upgraded Anatarasante police station.
@DgpKarnataka
@IGP_SR_Mysuru
@Chethan_R
ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಮಾನ್ಯ ಮುಖ್ಯಮಂತ್ರಿಗಳ ಪದಕ ಪಡೆದ ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಸಿಪಿಸಿ 152 ಶ್ರೀ.ಅಸ್ಲಂ ಪಾಷಾ ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
@Chethan_R
@IGP_SR_Mysuru
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ
@Seemalatkar_IPS
ರವರು ನೆನ್ನೆ ದಿನಾಂಕ. 27.12.2022 ರಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆ, ಮೈಸೂರು ಗ್ರಾಮಾಂತರ ವೃತ್ತ ಕಛೇರಿ ಹಾಗೂ ಮಹಿಳಾ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು . ಇದೇ ವೇಳೆ ಕಿರಿಯ ಅಧಿಕಾರಿಗಳಿಂದ ಠಾಣಾ ಸಂಬಂಧ ಮಾಹಿತಿ ಪಡೆದು , ಸಿಬ್ಬಂದಿಗಳ ಕರ್ತವ್ಯದ ಬಗ್ಗೆ ಪರಿಶೀಲಿಸಿದರು.
ಉತ್ತಮ ಕರ್ತವ್ಯ ನಿರ್ವಹಣೆ ತೋರಿದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಸಿಪಿಸಿ 263 ಶ್ರೀ.ಸಿ.ಎನ್.ಮಹೇಶ ರವರನ್ನು " ನವೆಂಬರ್ ಮಾಹೆಯ ಪೊಲೀಸ್ " ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು ಶ್ಲಾಘಿಸಿರುತ್ತಾರೆ.
@Chethan_R
@IGP_SR_Mysuru
@112Mysuru
ಕೊವೀಡ್ - 19 ಕಾರಣದಿಂದಾಗಿ ತೊಂದರೆಗೀಡಾಗಿದ್ದ ಹೊರ ರಾಜ್ಯದ ಆಟೋರಿಕ್ಷಾ ಚಾಲಕರು, ಕೂಲಿಕಾರ್ಮಿಕರು & ಗ್ರಾಮೀಣ ಪ್ರದೇಶದ ಜನರಿಗೆ ಸ್ವಂತ ಉಳಿತಾಯ ಹಣದಿಂದ 3000 ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು & ಮಾಸ್ಕ್ ಗಳನ್ನು ಒದಗಿಸುತ್ತಾ ಬಂದಿರುವ H.D.Kote ಠಾಣೆ ASI ಶ್ರೀ. ದೊರೆಸ್ವಾಮಿ ಯವರ ಕಾರ್ಯವನ್ನು ಮಾನ್ಯ SP ಯವರು ಪ್ರಶಂಸಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರನ್ನು ಸ್ಮರಿಸುತ್ತ, ಭಾರತೀಯ ಸ್ವತಂತ್ರ ಹೋರಾಟದಲ್ಲಿ ಮಡಿದ ಸ್ವತಂತ್ರ ಹೋರಾಟಗಾರರಿಗೆ ಮೌನಾಚರಣೆ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.
@IGP_SR_Mysuru
ರವರಾದ ಶ್ರೀ. ಪ್ರವೀಣ್ ಮಧುಕರ್ ಪವಾರ್ , ಐಪಿಎಸ್ ರವರು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ
@Seemalatkar_IPS
ರವರು
@AddlSPmysuru
ರವರು ಹಾಜರಿದ್ದರು.
ತುರ್ತು ಸಮಯದಲ್ಲಿ ERSS ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ. ಸೈಬರ್ ವಂಚನೆಗೊಳಗಾದಲ್ಲಿ Gloden Hour ಎಂದು ಪರಿಗಣಿಸಲ್ಪಡುವ ಘಟನೆ ನಂತರದ ಒಂದು ಗಂಟೆ ಅವಧಿಯೊಳಗೆ 112 ಕರೆ ಮಾಡಿ ಮಾಹಿತಿ ನೀಡಿ. ಅಪಘಾತ, ಗಲಾಟೆ, ಕಳ್ಳತನ, ಮೊದಲಾದ ತುರ್ತು ಸಮಯದಲ್ಲಿ 112 ಗೆ ಕರೆ ಮಾಡಿ..
@IGP_SR_Mysuru
@Seemalatkar_IPS
@112Mysuru
ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯವತಿಯಿಂದ ಹನುಮ ಜಯಂತಿ ಮತ್ತು ಈದ್ ಮಿಲಾದ್ ಹಬ್ಬದ ಶುಭಾಷಯಗಳು. ಈಗಾಗಲೇ ತಿಳಿಸಿದ ರೂಟ್ ಗಳಲ್ಲಿ
ತೆರಳಬೇಕು,ಹಾಗೂ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಶಾಂತಿಯುತ ಆಚರಣೆಗೆ ಸಹಕರಿಸಿ, ಯಾವುದೇ ಮಾಹಿತಿಗಾಗಿ ಕೆಳಕಂಡ ನಂಬರ್ ಸಂಪರ್ಕಿಸಿ.
9480805001
9480805022
08212444800
ಅಕಾಲಿಕ ಮರಣಕ್ಕೀಡಾದ ವರುಣಾ ಪೊಲೀಸ್ ಠಾಣೆಯ ಶ್ರೀ.ಶಿವಾನಂದ್ ಕಲ್ಲೂರ್ , ಸಿಪಿಸಿ 540 ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಜಿಲ್ಲಾ ಪೊಲೀಸ್ ಘಟಕವು ಪ್ರಾರ್ಥಿಸುತ್ತದೆ.
@Chethan_R
@IGP_SR_Mysuru
@112Mysuru
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್. ಆರ್.ಐಪಿಎಸ್ ರವರು ದಿನಾಂಕ.15/11/21 ರಂದು ಅಕ್ರಮ ಮಾನವ ಕಳ್ಳಸಾಗಣೆ ತಡೆ (AHTU) ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
@Chethan_R
@IGP_SR_Mysuru
ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿಯವ��ಾದ ಶ್ರೀ. ರವಿ ರವರು ತಮ್ಮ ಕರ್ತವ್ಯದಲ್ಲಿದ್ದಾಗ ಮಕ್ಕಳೊಂದಿಗೆ ಬೈಕಿನಲ್ಲಿಬಂದ ವ್ಯಕ್ತಿಗೆ ಕೈ ಮುಗಿದು ದಯವಿಟ್ಟು ಅನಗತ್ಯವಾಗಿ ಓಡಾಡದಿರಿ , ನಿಮ್ಮ ಸುರಕ್ಷತೆಗಾಗಿ ನಾವು ರಸ್ತೆಯಲ್ಲಿದ್ದೇವೆ ನೀವು ಮನೆಯಲ್ಲೇ ಕ್ಷೇಮವಾಗಿರಿ ಎಂದು ವಿನಮ್ರರಾಗಿ ತಿಳಿಸಿರುವುದು.
ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಎಲ್ಲಾ ಮಹಿಳೆಯರಿಗೆ #ಅಂತರಾಷ್ಟ್ರೀಯಮಹಿಳಾದಿನದ ಶುಭಾಶಯಗಳು. ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ನಿಮಿತ್ತ ಸ್ತ್ರೀ ಆರೋಗ್ಯ ಸಂಬಂಧಿಸಿದ ಕಾರ್ಯಗಾರ ಆಯೋಜಿಸಲಾಗಿತ್ತು, ರೆಡಿಯಂಟ್ ಆಸ್ಪತ್ರೆ ವೈದ್ಯರಾ ಡಾ.ಅನಿತಾ ಶೇಷಾದ್ರಿ ರವರು ಕಾರ್ಯಕ್ರಮ ಉದ್ಘಾಟಿಸಿದರು.
ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳೆಯರ 60KG ವಿಭಾಗದ ಕಿಕ್ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದ DAR ARSI ಶ್ರೀ.ಮಹದೇವಯ್ಯ ರವರ ಮಗಳಾದ ಕು.ಸಹನಾ ಎಂ ರವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸೀಮಾ ಲಾಟ್ಕರ್ ಐಪಿಎಸ್ ರವರು ಅಭಿನಂದಿಸಿದರು.
@IGP_SR_Mysuru
@AddlSPmysuru
ಮೈಸೂರು ಜಿಲ್ಲೆಯ ನಿಕಟಪೂರ್ವ ಎಸ್.ಪಿ ರವರಾದ
ಶ್ರೀ .ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್ ರವರನ್ನು ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅವರ ಮುಂದಿನ ವೃತ್ತಿ ಮತ್ತು ವ್ಯಯಕ್ತಿಕ ಜೀವನ ಸುಖಕರವಾಗಿರಲೆಂದು ಕೋರುತ್ತೇವೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್ ಐಪಿಎಸ್ ಮತ್ತು ಶ್ರೀಮತಿ ಅನನ್ಯ ಚೇತನ್ ರವರು ಆಯುಧ ಪೂಜೆ ನಿಮಿತ್ತ ಕಛೇರಿಯಲ್ಲಿ ಪೂಜಾ ಕಾರ್ಯ ನೆರವೇರಿಸಿದರು.ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್. ಶಿವಕುಮಾರ್ ರವರು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
@Chethan_R
@IGP_SR_Mysuru
ಮಾನ್ಯ ಕಾ&ಸು ಎಡಿಜಿಪಿ ರವರಾದ ಶ್ರೀ.ಹೀತೆಂದ್ರ.ಆರ್.ಐಪಿಎಸ್ ರವರಿಂದು ದಕ್ಷಿಣ ವಲಯ ಪೊಲೀಸ್ ಕಛೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
@Rangepol_SR
ರವರಾದ ಡಾ.M.B.ಬೋರಲಿಂಗಯ್ಯ, ಐಪಿಎಸ್ ರವರು,
#spmysuru
ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು.
@DgpKarnataka
ನೆನ್ನೆ ದಿನ ಎಎಸ್ಐ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಮುಂಬಡ್ತಿ ಪಡೆದ ಶ್ರೀ.ಕೆ.ಎ. ಚಂದ್ರು ರವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ರವರು ನಕ್ಷತ್ರ ತೊಡಿಸಿ ಅಭಿನಂದನೆ ಹೇಳಿದರು, ನೂತನ ಜವಬ್ದಾರಿಯಲ್ಲಿ ಇಲಾಖೆಗೆ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಜ್ಯೋತಿನಗರದ DAR ಮೈದಾನದಲ್ಲಿಂದು ನಡೆದ ವಾರದ ಕವಾಯತ್ತಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ ಐಪಿಎಸ್ ರವರು ಗೌರವ ವಂದನೆ ಸ್ವೀಕರಿಸಿ , ಕವಾಯತು ಪರಿವೀಕ್ಷಣೆ ನಡೆಸಿದರು.
@alokkumar6994
@IGP_SR_Mysuru
ದಿ. 01/07/2023 ರಂದು ಘನ ಕರ್ನಾಟಕ ಸರ್ಕಾರದ ಗೃಹ ಸಚಿವರಾದ
@DrGParameshwara
ರವರು,
#SR
-
#RANGEPOLICE
ಕಛೇರಿಯಲ್ಲಿ ದಕ್ಷಿಣ ವಲಯ ಪೊಲೀಸ್ ಘಟಕಗಳ ಹಿರಿಯ ಪೊಲೀಸ್ ಅಧಿಕಾರಿಗಳೊಡನೆ ಸಮಾಲೋಚನಾ ಸಭೆ ನಡೆಸಿದರು.
@Rangepol_SR
ಡಾ.ಎಂ.ಬಿ.ಬೋರಲಿಂಗಯ್ಯ, ಐಪಿಎಸ್ ರವರು,
#spmysuru
ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು ದಿನಾಂಕ.12.11.2021 ರಂದು ಬೆಟ್ಟದಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.ಇದೇ ವೇಳೆ ಸಿಬ್ಬಂದಿಗಳ ಕುಂದುಕೊರತೆ ಆಲಿಸಿ, ನೂತನ ಗಸ್ತು ಪದ್ದತಿ ಹಾಗೂ ಅಪರಾಧ ಪ್ರಕರಣಗಳ ಕುರಿತಾಗಿ ಸೂಚನೆಗಳನ್ನು ನೀಡಿದರು.
@Chethan_R
@IGP_SR_Mysuru
ಇಂದು ಕರ್ತವ್ಯದಿಂದ ವಯೋನಿವೃತ್ತಿ ಹೊಂದಿದ PSI ಶ್ರೀಮತಿ. ಜಯಕಾಂತಾಮಣಿ, ASI ಶ್ರೀ.ಶಂಕರಪ್ಪ, ಶ್ರೀ. ಮಂಜುನಾಥ, ARSI ಶ್ರೀ.ರಾಜಶೇಖರಮೂರ್ತಿ ರವರುಗಳನ್ನು
#SPMYS
ಶ್ರೀಮತಿ .ಸೀಮಾ ಲಾಟ್ಕರ್, ಐಪಿಎಸ್ ರವರು, ಆತ್ಮೀಯವಾಗಿ ಬೀಳ್ಕೊಟ್ಟರು.
@DgpKarnataka
@KarnatakaCops
@Rangepol_SR
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯಡಿ ಆಯ್ಕೆ ಆಗಿರುವ ಶಾಲಾ - ಕಾಲೇಜುಗಳ ಸಮನ್ವಯ ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್. ಐಪಿಎಸ್ ರವರು ಮಾತನಾಡಿದರು . DCRB Dy sp & SPC ಯೋಜನೆಯ ಸಮನ್ವಯಕರಾದ ಡಾ.ಸುಮಿತ್ ರವರು , ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
@Chethan_R
@IGP_SR_Mysuru
ದಿನಾಂಕ.13/12/2021 ::
ನೆಸ್ಲೆ ಕಂಪೆನಿಯು ತನ್ನ ಮಹಿಳಾ ಸಿಬ್ಬಂದಿಗಳನ್ನು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿಯೋಜಿಸುವ ಸಂಬಂಧವಾಗಿ, ನಂಜನಗೂಡು ಉಪವಿಭಾಗದಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಹಿಳಾ ಅಧಿಕಾರಿ ಸಿಬ್ಬಂದಿಗಳೊಡನೆ ಸಂವಾದ ನಡೆಸಲಾಯಿತು. SP ರವರಾದ
@Chethan_R
ರವರು ಪಾಲ್ಗೊಂಡರು.
@IGP_SR_Mysuru
PI CEN ಪೊಲೀಸ್ ಠಾಣೆ & ತಂಡದವರ ಕಾರ್ಯಾಚರಣೆ, ಕಳೆದುಹೋಗಿದ್ದ 10 ಮೊಬೈಲ್ ಪೋನ್ ಗಳನ್ನು
#CEIR
portal ನ ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು. ಪತ್ತೆಯಾದ ಮೊಬೈಲ್ ಪೋನ್ ಗಳ ಮೊತ್ತವು ಸುಮಾರು 1.4 ಲಕ್ಷ ರೂ ಮೌಲ್ಯವಾಗಿರುತ್ತದೆ.
@DgpKarnataka
@IGP_SR_Mysuru
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ , ಐಪಿಎಸ್ ರವರಿಂದು ನಂಜನಗೂಡು ಗ್ರಾಮಾಂತರ & ನಂಜನಗೂಡು ಸಂಚಾರಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು. ಇದೇ ವೇಳೆ ಠಾಣಾ ಆವರಣದಲ್ಲಿದ್ದ ಪ್ರಕರಣಗಳ ಮಾಲುಗಳನ್ನು ತ್ವರಿತಗತಿಯಲ್ಲಿ ಸಕ್ಷಮ ಪ್ರಕ್ರಿಯೆ ಮೂಲಕ ವಿಲೇಗೊಳಿಸಲು ಸೂಚಿಸಿದರು.
@IGP_SR_Mysuru
@Seemalatkar_IPS