Prahlad K H, President, Bharatha Surachana Mandala Profile Banner
Prahlad K H, President, Bharatha Surachana Mandala Profile
Prahlad K H, President, Bharatha Surachana Mandala

@PrahladKH1

1,836
Followers
1,296
Following
1,526
Media
17,123
Statuses

ಕನ್ನಡಿಗ/Indian/Hindu/OBC. Advise in Politics/Career Advancement/Farm Development/House Construction. Interested in Writing, Cinema, Temples, History & Charity!

Magadi - Kunigal, India
Joined September 2017
Don't wanna be here? Send us removal request.
Pinned Tweet
@PrahladKH1
Prahlad K H, President, Bharatha Surachana Mandala
11 months
@kannadadamaga ದೊಡ್ಡ ಮಾತು! ಇಲ್ಲಿ ತೋರಿರುವ ಕೆಲ ದೈವಿಕ ಶಕ್ತಿ-ವ್ಯಕ್ತಿತ್ವ ಮತ್ತು ಪರಿಕಲ್ಪನೆಗಳಿಂದ ನನಗೆ ಸಹಾಯವಾಗಿರುವುದು ಹಾಗೂ ನಾನೂ ಸ್ಪೂರ್ತಿಗೊಂಡಿರುವುದು ಸತ್ಯ! ಇವೆಲ್ಲಾ ನಮ್ಮ ಅಸ್ತಿತ್ವದ ಆಯಾಮಗಳು! ಕೆಲವು ಇಷ್ಟವಿಲ್ಲ (ಉದಾ: ಜಾತಿ)! ಆದರೆ ಈ ದೇಶದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುವರಿಗೆ ಎಲ್ಲಾ ಆಯಾಮಗಳು ಮುಖ್ಯವಾಗುತ್ತವೆ! ಅದಕ್ಕೇ ಇದು!
0
1
6
@PrahladKH1
Prahlad K H, President, Bharatha Surachana Mandala
2 years
ಕ್ರಾಂತಿ: ಜ್ವಲಂತ ಸಮಸ್ಯೆಯ ಬಗ್ಗೆ ಅರೆಬರೆ ಪ್ರಯತ್ನ! @dasadarshan ಉತ್ತಮ ಕಥೆಯಲ್ಲಿ ಒಂದು ಮುಖ್ಯ ಪಾತ್ರವಾಗುವ ಸಿನೆಮಾ ಮಾಡಬೇಕೇ ಹೊರತು ತನ್ನ ದೇಹದಾರ್ಢ್ಯ, ಪ್ರಭಾವಳಿಯೇ ಕಥೆಯಾಗುವ ಸಿನೆಮಾ ಮಾಡಬಾರದು! ಆಯ್ಕೆಯ ಸ್ವತಂತ್ರಯಿರುವ ದರ್ಶನ್, ಇನ್ನು ಮುಂದೆ ಎಚ್ಚರಿಕೆಯಿಂದ ಉತ್ತಮ ಸಿನೆಮಾ ಮಾಡಲಿ! ಹರಿಕೃಷ್ಣ ಸಂಗೀತಗಾರರಾಗಿಯೇ ಉಳಿಯಲಿ!
Tweet media one
62
122
2K
@PrahladKH1
Prahlad K H, President, Bharatha Surachana Mandala
1 year
For all Rajkumar Fans! Compiled link to all Dr Raj movies! Movie No.1 to Movie No.205 all links. *Watch Dr Rajkumar's movie at your convenience
17
326
841
@PrahladKH1
Prahlad K H, President, Bharatha Surachana Mandala
1 year
Hostel ಹುಡುಗರು ಬೇಕಾಗಿದ್ದಾರೆ ಎಂಬ ಸಾಧಾರಣ ಸಿನೆಮಾ! ೧. ಸಿನೆಮಾ ಹೆಸರಿಗೂ, ಕಥೆಗೂ ಯಾವ ಸಂಬಂಧವೂ ಇಲ್ಲ! ೨. ಮುಖ್ಯ ಪಾತ್ರಧಾರಿಗಳು ವಿದ್ಯಾರ್ಥಿಗಳಂತೆ ಕಾಣದೇ ಬಲಿತ ಸಂಸಾರಿಗಳಂತೆ ಕಾಣುವರು! ೩. ಕ್ಯಾಮೆರಾ ಕೈಚಳಕ ಚೆನ್ನಾಗಿದೆ! ೪. ಕೆಲವು ಡೈಲಾಗ್ ಗಳು ಖುಷಿ ಕೊಡುತ್ತವೆ! ೫. ಚಾಕಚಕ್ಯತೆ ಹಾಗೂ ವ್ಯವಸ್ಥಿತ ಪ್ರಚಾರ ಮಾಡಿ ಗೆದ್ದಿದ್ದಾರೆ!
Tweet media one
30
19
541
@PrahladKH1
Prahlad K H, President, Bharatha Surachana Mandala
2 years
ಪ್ರಜ್ವಲಿಸದ ದೇವರಾಜ! ಈತ ಮುವ್ವತ್ತಕ್ಕೂ ಹೆಚ್ಚು ಸಿನೆಮಾ ಮಾಡಿ ಆಗಿದೆ! ಯಾರಾದರೂ ಈತನ ಸಿನೆಮಾ ನೋಡಿರುವಿರಾ? ನಾನು ಒಂದು ಸಿನೆಮಾಗೆ ಹೋಗಿ ಗಡದ್ದಾಗಿ ನಿದ್ದೆ ಹೊಡೆದು ಬಂದೆ! ಯಾವುದಾದರೂ ಯಶಸ್ಸು/ಪ್ರಶಸ್ತಿ ಕಂಡಿದೆಯೇ? ಹತ್ತಕ್ಕೆ ನಾಲಕ್ಕಾದರೂ ಯಶಸ್ವಿ ಯಾಗದಿದ್ದರೇ ಸಿನೆಮಾ ಏಕೆ ತಯಾರಿಸಬೇಕು? ಬೇರೊಂದು ಉದ್ಯಮ ಮಾಡಿಕೊಂಡು ಇರಲಾಗದೇ?
Tweet media one
91
24
451
@PrahladKH1
Prahlad K H, President, Bharatha Surachana Mandala
1 year
#ಸಾನ್ವಿಸುದೀಪ್: ಹೊಸ ತಲೆಮಾರಿನ ಅತ್ಯಂತ ಗಮನಾರ್ಹ ಕಂಠಸಿರಿ! ಜೇಮ್ಸ್ ಬಾಂಡ್ ಶೀರ್ಷಿಕೆ ಹಾಡುಗಳಂತೆ ಶ್ರೀಮಂತ ಧ್ವನಿಯಲ್ಲಿ ಹಾಡಿ ಎಲ್ಲರಿಗೂ ಮೋಡಿ ಮಾಡಿರುವ ಈ ತರುಣೆ ಭರವಸೆಯ ಸೆಲೆ! ಜೊತೆಗೆ @KicchaSudeep ರ ಮಗಳಾದ್ದರಿಂದ ಆರಂಭಿಕ ಅವಕಾಶಗಳಿಗೆ ಕೊರತೆಯಿರುವುದಿಲ್ಲ ಅಂದುಕೊಳ್ಳುವ! ಈಕೆಯ ಕಂಗಳಲ್ಲಿ ಗ್ರಾಮಿ ಪ್ರಶಸ್ತಿ ಕಾಣುತ್ತಿದೆ!
@KannadaPrabha
kannadaprabha
1 year
ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಿರ್ದೇಶಿಸಿ ನಾಯಕ ನಟನಾಗಿ ನಟಿಸುತ್ತಿರುವ ಚಿತ್ರ ಜಿಮ್ಮಿಯ ಟೀಸರ್ ಬಿಡುಗಡೆ ಸಮಾರಂಭ ನಿನ್ನೆ ಬೆಂಗಳೂರಿನಲ್ಲಿ ಏರ್ಪಟ್ಟಿದ್ದು ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ವೇದಿಕೆಯಲ್ಲಿ ಹಾಡಿದರು. ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಹಿನ್ನೆಲೆ ಗಾಯಕಿಯಾಗಿ ಜಿಮ್ಮಿ
3
60
449
3
65
437
@PrahladKH1
Prahlad K H, President, Bharatha Surachana Mandala
1 year
ಇಂದಿರಾ ಕ್ಯಾಂಟೀನ್: ಅಪೂರ್ವ, ಅಧ್ಭುತ ಯೋಜನೆ! ಇಂದಿರಾ ಕ್ಯಾಂಟೀನ್ ಸ್ವರೂಪದ ಬಗ್ಗೆ ಚಿಂತಿಸಿದೆ! ಇದು ಅನ್ನ ಭಾಗ್ಯಕ್ಕಿಂತ ಉತ್ತಮವಾದ ಯೋಜನೆ ಅನ್ನಿಸಿತು! ಪ್ರತಿ ಹೋಬಳಿ/ಪಟ್ಟಣ/ನಗರಗಳಲ್ಲಿ ಅಗತ್ಯಗನುಗುಣವಾಗಿ ಇವನ್ನು ಆರಂಭಿಸಬೇಕು. ಹಾಗೂ ಇವನ್ನು ಸರ್ಕಾರಾತೀತವಾಗಿ ವ್ಯವಸ್ಥಿತಗೊಳಿಸಿದರೆ ಉತ್ತಮ! @siddaramaiah @DKShivakumar
Tweet media one
20
39
370
@PrahladKH1
Prahlad K H, President, Bharatha Surachana Mandala
11 months
ತೀರಾ ಸಾಮಾನ್ಯರೆಂದು ಮರೆತುಬಿಡುವ ಕೆಳವರ್ಗದ ಜನರ ಬದುಕನ್ನಾಧರಿಸಿದ ಸಾರ್ವಕಾಲಿಕ ಹಿಟ್ ಜಾಕಿ ಮತ್ತು ಕಡ್ಡಿಪುಡಿಯಂತ ವ್ಯಾವಹಾರಿಕವಾಗಿ ಯಶಸ್ವಿಯಾದ ಕಲಾತ್ಮಕ ಸಿನೆಮಾಗಳನ್ನು ಕೊಟ್ಟ ನಿಪುಣ ಕಥಾ ನಿರೂಪಣೆಗಾರ ದುನಿಯಾ ಸೂರಿ ಎಲ್ಲಿ? ಯಾವ ಲೋಕದಲ್ಲಿ ಅಡಗಿದ್ದಾರೆ? ಅವರ ಮುಂದಿನ ಸಿನೆಮಾ ಬಗ್ಗೆ ಸುದ್ದಿ ಏಕಿಲ್ಲಾ?
Tweet media one
18
22
339
@PrahladKH1
Prahlad K H, President, Bharatha Surachana Mandala
6 months
ಬೇರೆ ರಾಜ್ಯಗಳಲ್ಲಿ ಪುಂಡು ಗಲಭೆಗಳನ್ನು ಮಾಡುತ್ತಾ ಕಾಲ ಕಳೆದ ಬಾಲವಟು @Tejasvi_Surya ತನ್ನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸೊನ್ನೆ! ಈತನಿಗೆ ಮತ್ತೆ ಟಿಕೆಟ್ ಕೊಟ್ಟರೆ ಠೇವಣಿ ಉಳಿಯುವುದು ಅನುಮಾನ! @BJP4India @BJP4Karnataka @narendramodi @AmitShah @JPNadda #ಲೋಕಸಭಾ_ಚುನಾವಣೆ_ಟಿಪ್ಪಣಿ: ೪
Tweet media one
82
28
315
@PrahladKH1
Prahlad K H, President, Bharatha Surachana Mandala
1 year
Kannada does not exist for the @IncomeTaxIndia of India! We earn in Karnataka and we pay Lakhs of rupees of income tax and get replies in Hindi and English! Total nonsense! When will I get replies in Kannada Madam and Sir? @nsitharaman @narendramodi @siddaramaiah @DKShivakumar
Tweet media one
Tweet media two
21
97
301
@PrahladKH1
Prahlad K H, President, Bharatha Surachana Mandala
2 years
ಅನಂತ್ ನಾಗ್: ಕೆಲಸವಿಲ್ಲದ ಬ್ರಾಹ್ಮಣನ ಬಡಬಡಿಕೆ: ಒಂದು ಕಾಲದಲ್ಲಿ ಸೃಜನಶೀಲ ಕಲಾವಿದ, ಬುದ್ಧಿಜೀವಿ, ಪ್ರಗತಿಶೀಲ ರಾಜಕಾರಿಣಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಈ ವ್ಯಕ್ತಿ ಇಂದು ವಯಸ್ಸು, ನಿರುದ್ಯೋಗ, ಅಲ್ಜೈಮರ್ಜ್, ವಯಕ್ತಿಕ ವಿಫಲತೆ ಅಥವಾ ಯಾವುದೇ ರಾಷ್ಟ್ರಪ್ರಶಸ್ತಿ ಪಡೆಯದ ಕಾರಣಕ್ಕೆ ಬೇಜವಾಬ್ದಾರಿಯಿಂದ ಪರಿಣಾಮ ಅರಿಯದೆ ಮಾತನಾಡಬಾರದು!
Tweet media one
21
28
257
@PrahladKH1
Prahlad K H, President, Bharatha Surachana Mandala
1 year
ಕಮಲ ಮುಡಿದ ಸುಮಲತ! ಅಂಬರೀಶ್ ಪ್ರತಿನಿಧಿಸಿದ್ದ ಜಾತ್ಯತೀತ ತತ್ವಗಳನ್ನು ಎತ್ತಿ ಹಿಡಿಯುತ್ತಾರೆ ಅಂತ ತಿಳಿದು ಮಂಡ್ಯ ಜನರು ಸಹಾನುಭೂತಿಯಿಂದ ಗೆಲ್ಲಿಸಿದ್ದ ಸುಮಲತ ಅದಕ್ಕೆ ವಿರುದ್ಧವಾಗಿ ಬಿಜೆಪಿಯ ಉಂಬಳಿ ತತ್ವದ ಪಾಲಾಗಿದ್ದಾರೆ! ಈಗ ಈಕೆಯನ್ನು ಸೋಲಿಸಿ, ಮನೆಯಲ್ಲಿ ಕೂರಿಸಬೇಕಾದ ಜವಾಬ್ದಾರಿ ಮಂಡ್ಯ ಜನರ ಮೇಲಿದೆ!
Tweet media one
24
32
257
@PrahladKH1
Prahlad K H, President, Bharatha Surachana Mandala
5 years
ಟ್ವಿಟರ್ ಕನ್ನಡಿಗರಲ್ಲಿ ಒಂದು ಮನವಿ: ನಾವೆಲ್ಲಾ ಕನ್ನಡ - ಕನ್ನಡಿಗ - ಕರ್ನಾಟಕ ಕ್ಕೆ ಸಂಬಂಧ ಪಟ್ಟ ಎಲ್ಲಾ ವಿಷಯಗಳ ಬಗ್ಗೆ ಕನ್ನಡದಲ್ಲೇ ಟ್ವೀಟ್ ಮಾಡುವ. ಹೆಸರು ಮಾಡಿರುವ ಕನ್ನಡಿಗರು (ಸಿನೆಮಾ ನಟರು, ರಾಜಕಾರಣಿಗಳು ಇತ್ಯಾದಿ) ಈ ನಿಲುವನ್ನು ವಿಶೇಷವಾಗಿ ಮನಸ್ಸಿಗೆ ಹಾಕಿ ಕೊಳ್ಳಬೇಕು. ಇದನ್ನು ಎಲ್ಲರೂ ದಯವಿಟ್ಟು ಮರು ಟ್ವೀಟ್ ಮಾಡಿ!
9
82
226
@PrahladKH1
Prahlad K H, President, Bharatha Surachana Mandala
2 years
ಶಿವಮೊಗ್ಗದ ಜನರಿಗೆನಾಗಿದೆ? ಅಲ್ಲಮ ಪ್ರಭು, ಅಕ್ಕಮಹಾದೇವಿ, ಕುವೆಂಪು, ಕಡಿದಾಳ್ ಮಂಜಪ್ಪ, ಗೋಪಾಲಗೌಡ, ಶಿವರುದ್ರಪ್ಪ, ತೇಜಸ್ವಿ, ಲಂಕೇಶ್, ಅನಂತಮೂರ್ತಿ ಹಾಗೂ ಸುಬ್ಬಣ್ಣರಂಥ ಘನ ವ್ಯಕ್ತಿಗಳನ್ನು ರೂಪಿಸಿದ ಸಮಾಜ, ಗಾಂಧೀಜಿಯವರ ಹತ್ಯೆಗೈದ ವ್ಯಕ್ತಿಯ ಫೋಟೋ ಮೆರವಣಿಗೆ ನಡೆಸಲು ಅವಕಾಶ ಕೊಟ್ಟಿದ್ದು ಹೇಗೆ? ನಿಜವಾದ ಶಿವಮೊಗ್ಗ ಎದ್ದು ನಿಲ್ಲಲಿ!
Tweet media one
@prajavani
Prajavani
2 years
ಶಿವಮೊಗ್ಗ: ಗಣಪತಿ ಮೆರವಣಿಗೆಯಲ್ಲಿ ಗೋಡ್ಸೆ ಫೋಟೊ ಪ್ರದರ್ಶನ #godse
31
5
86
16
55
233
@PrahladKH1
Prahlad K H, President, Bharatha Surachana Mandala
2 years
ಕನ್ನಡಿಗರ ಎದೆಗೆ ನೇರ ಗುಂಡು! ಕನ್ನಡ ನಾಡಿನಲ್ಲೇ, ನಾಡ ಮುಖ್ಯಮಂತ್ರಿಯೊಬ್ಬರು ಸಾವಿರಾರು (ಲಕ್ಷಾಂತರ?) ಕನ್ನಡಿಗರ ಎದುರಿನಲ್ಲೇ ಹಿಂದಿಯಲ್ಲಿ ಮಾತನಾಡುವುದು ಅತ್ಯಂತ ಅಸಹ್ಯಕರ ಹಾಗೂ ಅವಮಾನದ ಸಂಗತಿ! ಇದನ್ನು ನೋಡಬೇಕಾಗಿ ಬಂದದ್ದು ಕನ್ನಡಿಗರ ದುರ್ವಿಧಿ! ಹಾಗೇಯೇ ನಮ್ಮ ಸಭ್ಯತೆಯ ದುರುಪಯೋಗ! ಎಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು!
@kadambacreation
ಕದಂಬ
2 years
ಕರ್ನಾಟಕದ ಮಾನ ಮರ್ಯಾದೆ ಹೋಯ್ತು. ಗುಲಾಮಗಿರಿಯ ಉತ್ತುಂಗ ತನ 👇ಹಿಂದಿ ಭಾಷಣ, ಹಿಂದಿ ಅಕ್ಷರ ಥು.. ನಮ್ಮ ನಾಡಿನ ಸಂಸ್ಕೃತಿ ಹಾಳು ಮಾಡಿಬಿಟ್ರು 😡 ಕನ್ನಡಿಗರೇ ಎಚ್ಚರವಾಗಿ😡 @rajanna_rupesh @Jaggesh2 @nanminiradio @Anand_GJ @hd_kumaraswamy @kdabengaluru @narayanagowdru @KannadaGrahaka @kannadamanasuga
22
115
358
10
67
221
@PrahladKH1
Prahlad K H, President, Bharatha Surachana Mandala
1 year
ಏನ್ರೀ @siddaramaiah ಇದು? ಅಸಹ್ಯ! ಒಂದು ಕಾಲದಲ್ಲಿ ಇಂದಿರಾ ಗಾಂಧಿ ಕುಟುಂಬ ರಾಜಕಾರಣ ವಿರೋಧಿಸಿ, ನಂತರ ದೇವೇಗೌಡರ ಕುಟುಂಬ ರಾಜಕಾರಣ ವಿರೋಧಿಸಿ, ಈಗ ಇನ್ನೂ ಪ್ರಾಯಕ್ಕೆ ಬರದ ಮೊಮ್ಮಗನನ್ನು ಮುಂದೆ ಇಟ್ಟುಕೊಂಡು, ಏನೀ ಅರಳು-ಮರಳಿನ ಪ್ರಲಾಪ! ನಿಮ್ಮ ನಂಬಿ ಅಸಂಖ್ಯಾತ ಜನರು ಕಾಯುತ್ತಿದ್ದಾರೆ! ಸಧ್ಯಕ್ಕೆ ಅವರ ಕಡೆ ಗಮನ ಕೊಡಿ! @prajavani
Tweet media one
25
35
216
@PrahladKH1
Prahlad K H, President, Bharatha Surachana Mandala
3 years
ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದ ನೆಹರು ಮತ್ತು 21ನೇ ಶತಮಾನಕ್ಕೆ ಬೇಕಾದ ಹೆದ್ದಾರಿ ಜಾಲ ರೂಪಿಸಿದ ವಾಜಪೇಯಿ ಎಲ್ಲಾ ನರಮನುಷ್ಯರ ಹಾಗೇ ತಮ್ಮ ದೌರ್ಬಲ್ಯಗಳ ಜೊತೆಗೆ ಬದುಕಿದವರು, ಸಾಧಿಸಿದವರು! ಇದನ್ನು ಸೂಕ್ತವಾಗಿ ಅರಿಯದ ಅಪಕ್ವ ಮತ್ತು ಮಾಡಲು ಕೆಲಸವಿಲ್ಲದ ರಾಜಕಾರಣಿಗಳು ಹಾಗೂ ಸರಿಯಾಗಿ ವರದಿ ಮಾಡದ ಮಾಧ್ಯಮಗಳೆರಡೂ ಇವತ್ತಿನ ಅಪ್ರಸ್ತುತಗಳು!
Tweet media one
Tweet media two
9
37
204
@PrahladKH1
Prahlad K H, President, Bharatha Surachana Mandala
2 years
@KicchaSudeep ರಿಗೆ ಜೈ! ಅಖಿಲ ಭಾರತ ಮಟ್ಟದ ಹೆಜ್ಜೆಗುರುತು ಮೂಡಿಸಿರುವ, ಕನ್ನಡದ ಜನಪ್ರಿಯ ಸಿನೆಮಾ ನಟ ಸುದೀಪ್ರವರು, ನಮ್ಮ ಭಾಷೆಯ ಹೆಸರನ್ನು ಉಚ್ಚರಿಸವದನ್ನು ಇತರ ಭಾರತೀಯರಿಗೆ ಹೇಳಿಕೊಡುವ ಆಂದೋಲನ ಆರಂಭಿಸಿರುವುದು ಅತ್ಯಂತ ಶ್ಲಾಘನೀಯ! ಈ ಮೇಲ್ಪಂಕ್ತಿಯನ್ನು @NimmaShivanna @Jaggesh2 @nimmaupendra @TheNameIsYash ಅನುಸರಿಸಲಿ!
Tweet media one
3
50
199
@PrahladKH1
Prahlad K H, President, Bharatha Surachana Mandala
4 months
ಬಡಪಾಯಿ ಲಕ್ಷ್ಮಣ ಗೆಲ್ಲಲಿ! ಎಲ್ಲಾ ಇರುವ, ಇವತ್ತಿಗೂ ನಾಡಿನ ಘನ ಸಂಸ್ಕೃತಿಯ ಸಾಂಪ್ರದಾಯಿಕ ವಾರಸುದಾರ ದೊರೆಗೆ ರಾಜಕೀಯ ಏಕೆ ಬೇಕು? ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ದೊರೆಯದು! ನಾನಾ ಕಾರಣಕ್ಕೆ ಅವರ ಪ್ರತಿಸ್ಪರ್ಧಿಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ! ಹಾಗಾಗಿ ಮೈಸೂರ ಜನ ಲಕ್ಷ್ಮಣರನ್ನು ಗೆಲ್ಲಿಸುವ ಸಾಧ್ಯತೆಯಿದೆ!
Tweet media one
67
29
204
@PrahladKH1
Prahlad K H, President, Bharatha Surachana Mandala
3 years
ಲಂಕೇಶ್/ಬಿ ವಿ ಕಾರಂತ/ ಗಿರೀಶ್ ಕಾರ್ನಾಡ್ರ ಸಹವಾಸದಿಂದ ಕೆಲವು ಒಳ್ಳೆ ಸಿನೆಮಾಗಳನ್ನು ನೀಡಿದ್ದ @TSNagabharana ಎಂಬ ಅತಂತ್ರ ಜೀವಿ ಇತರರ ಸಹಾಯದಿಂದ @kdabengaluru ಅಧ್ಯಕ್ಷ ಪದವಿ ಗಿಟ್ಟಿಸಿಕೊಂಡು, ರಾಜಕಾರಣಿಗಳ ಮರ್ಜಿಗೆ ನಡೆದುಕೊಳ್ಳುವುದು ಸಾಲದೆಂಬಂತೆ ಈಗ @astitvam ಎಂಬ ಬಾಡಿಗೆ ಬುರುದೆದಾಸರಿಗೆ ವೇದಿಕೆ ಕೊಟ್ಟಿರುವುದು ಚಿಂತಾಜನಕ!
Tweet media one
7
41
201
@PrahladKH1
Prahlad K H, President, Bharatha Surachana Mandala
1 year
ಕುಟುಂಬ ಪರದೇಶಕ್ಕೆ ಹೋದಾಗ, ನಾನು ಒಬ್ಬನೇ ಇದ್ದಾಗ, ಉಪವಾಸ ಇರಬಾರದೆಂದು ಸ್ನೇಹಿತರು ತಂದುಕೊಟ್ಟ ಖಾದ್ಯಗಳು! ಶಿವಮೊಗ್ಗ ಶೈಲಿಯ ಕೈಮಾ, ಕೋಳಿ ಬಿರಿಯಾನಿ, ಮೊಸರಿನ ಪಚಡಿ, ಮೈಸೂರು ಶೈಲಿಯ ಕುರಿ ಮಾಂಸದ ಸಾರು, ಒಗ್ಗರಣೆ ಅನ್ನ! ಅನ್ನದಾತ ಸುಖೀ ಭವ!
Tweet media one
6
6
195
@PrahladKH1
Prahlad K H, President, Bharatha Surachana Mandala
2 years
ರೀ @bcpatilkourava ರೇ, ಡಿಎಪಿ ಗೊಬ್ಬರ ಎಲ್ಲಿ ಲಭ್ಯವಿದೆ? ಚಿಕ್ಕಬಳ್ಳಾಪುರದಿಂದ ಚಿಕ್ಕಮಗಳೂರಿನವರೆಗೂ ಪರಿಶೀಲನೆ ಮಾಡಿರುವೆ! ಡಿಎಪಿ ಗೊಬ್ಬರ ಎಲ್ಲೂ ದೊರಕುತ್ತಿಲ್ಲ! ರೈತರಿಗೆ ಬೇಕಾಗುವ ಸಮಯಕ್ಕೆ ಸರಿಯಾಗಿ ಈ ಗೊಬ್ಬರ ಮಾಯವಾಗುವುದು ಏಕೆ? ಈ ಸಮಯದಲ್ಲಿ ನೀವು ನಿದ್ದೆ ಮಾಡುವುದೇಕೆ? @BSBommai @nstomar @ShobhaBJP @KailashBaytu
Tweet media one
15
43
177
@PrahladKH1
Prahlad K H, President, Bharatha Surachana Mandala
4 years
ಇಂದಿನ ಪತ್ರಿಕಾ ಗೋಷ್ಠಿಯಲ್ಲಿ @hd_kumaraswamy ರವರು ಸಂಘ ಪರಿವಾರದ ಎಲ್ಲಾ ಅಂಗಗಳನ್ನು ದಿಟ್ಟವಾಗಿ, ಯಾವ ಮುಲಾಜಿಲ್ಲದೆ, ತರಾಟೆಗೆ ತೆಗೆದುಕೊಂಡ ಪರಿ ಶ್ಲಾಘನೀಯ! ಅವರ ಹಿಂದಿನ ತಪ್ಪುಗಳು ಏನೇ ಇರಲಿ, ಈಗ ಹೊಸ ಭರವಸೆಯ ನಾಯಕರಾಗಿ ಕಾಣುತ್ತಿದ್ದಾರೆ! @H_D_Devegowda @hd_revanna @Nikhil_Kumar_k @iPrajwalRevanna @Kanagalogy
2
23
170
@PrahladKH1
Prahlad K H, President, Bharatha Surachana Mandala
3 years
ಕನ್ನಡ ಕೊಲ್ಲುತ್ತಿರುವ ಟಿವಿ ಚಾನಲ್ಗಳು! ಇವತ್ತು ಕನ್ನಡ ಭಾಷೆಯ ಜ್ಞಾನ, ವ್ಯಾಕರಣ, ಬಳಕೆ, ಉಚ್ಚಾರ ಹಾಗೂ ಸಂವಹನ ಗೊತ್ತಿಲ್ಲದ ಸಾರ್ವಜನಿಕ ಸಂಸ್ಥೆಗಳೆಂದರೆ, ಅವು ಕನ್ನಡ ಟಿವಿ ಚಾನಲ್ಗಳು! ಕನ್ನಡ ಬೆಳಸಬೇಕಾದ ಈ ಮಾಧ್ಯಮಗಳು ಭಾಷಾ ಅಜ್ಞಾನ, ನಮ್ಮ ಸಂಸ್ಕೃತಿಯ ಹಿನ್ನಲೆ ಮತ್ತು ವೈವಿಧ್ಯತೆಯ ಅರಿವಿಲ್ಲದೇ ಭಾಷೆಯನ್ನು ಹಾಳು ಮಾಡುತ್ತಿದ್ದಾರೆ!
2
28
163
@PrahladKH1
Prahlad K H, President, Bharatha Surachana Mandala
8 months
ಶಿಖರವೇ ಪೂರ್ಣಗೊಳ್ಳದ ಆಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆ ತರವೇ? ಇವತ್ತಿನ ವರದಿಗಳ ಪ್ರಕಾರ ಶ್ರೀ ರಾಮ ಮಂದಿರ ಸಂಪೂರ್ಣವಾಗಿ ಸಿದ್ಧವಾಗಲು ಇನ್ನೂ ಹಲವು ವರ್ಷಗಳೇ ಬೇಕು! ಹೀಗಿರುವಾಗ ಏತಕ್ಕಾಗಿ, ಯಾರಿಗಾಗಿ @narendramodi ಯವರು ಈ ಗುಡಿಯನ್ನು ತುರ್ತಾಗಿ ಉದ್ಘಾಟಿಸುತಿದ್ದಾರೆ? ಇದರಿಂದ ದೈವ ಶಕ್ತಿ ಮುನಿದರೆ ದೇಶಕ್ಕೆ ಒಳ್ಳೆಯದೇ?
Tweet media one
Tweet media two
65
27
170
@PrahladKH1
Prahlad K H, President, Bharatha Surachana Mandala
2 years
ಈ ಅಜ್ಞಾನಿಗೆ ಸರಿಯಾದ ದಾರಿಯಲ್ಲಿ ಹೋಗಿ ಎಂದು ಬುದ್ಧಿ ಹೇಳಿದ್ದಕ್ಕೆ ಬ್ಲಾಕ್ ಮಾಡಿದ್ದಾರೆ! ಇವರೆಲ್ಲಾ ಜನರ ಪ್ರತಿನಿಧಿಗಳೇ? ಇವರು ಮಾತ್ರ ಬಾಯಿಗೆ ಬಂದ ಹಾಗೆ ತಮ್ಮ ಮೂರ್ಖತನ ತೋರಬಹುದು! ಆದರೆ ಜನರ ಒಂದು ನೇರ ಮಾತನ್ನು ಕೇಳಲು ಸಿದ್ಧವಿಲ್ಲ! ಸೊಂಟದ ಕೆಳಗಿನ ಜೋಕ್ ಹೇಳಿಕೊಂಡು ಮೇಲೆ ಬಂದ ನಟನಿಂದ ಉತ್ತಮವಾದದನ್ನು ನಿರೀಕ್ಷಿಸಲು ಸಾಧ್ಯವೇ?
Tweet media one
@PrahladKH1
Prahlad K H, President, Bharatha Surachana Mandala
2 years
@Jaggesh2 @narendramodi ಕನಿಷ್ಠ ಜ್ಞಾನ ಇಲ್ಲದ ಮಾತುಗಳು ಜಗ್ಗೇಶ್ ರವರೇ! ನೀವು, ಮೋದಿ, ಸಿದ್ಧರಾಮಯ್ಯ ಮತ್ತು ಎಲ್ಲಾ ರಾಜಕೀಯ ನಾಯಕರಿಗೂ ಅನ್ನ ಹಾಕುತ್ತಿರುವವರು ಭಾರತೀಯರು/ಕನ್ನಡಿಗರು! ಎಚ್ಚರದಿಂದ ಜವಾಬ್ದಾರಿಯ ಮಾತುಗಳು ಆಡಿದರೆ, ಕಲಾವಿದರಿಗೆ ಸಿಕ್ಕ ಮರ್ಯಾದೆ ಉಳಿಸಿಕೊಳ್ಳಬಹುದು! ಇಲ್ಲದಿದ್ದರೆ ವ್ಯರ್ಥ ಜೀವಿಯಾಗಿ ಬದುಕಬಹುದು!
6
13
123
16
18
157
@PrahladKH1
Prahlad K H, President, Bharatha Surachana Mandala
1 year
ಹಾಗೇಯೇ, ಮಾನ್ಯ @H_D_Devegowda ರು ಒಂದು ಪ್ರಾದೇಶಿಕ ಪಕ್ಷವನ್ನು ಹೇಗೆ ಕಟ್ಟಬೇಕು ಅನ್ನುವುದನ್ನು ತಮಿಳರನ್ನು ನೋಡಿ ಕಲಿತು ಕೊಳ್ಳಬೇಕಿತ್ತು! ತಮ್ಮ ಕುಟುಂಬಕ್ಕಾಗಿ ಇತರ ನಾಯಕರನ್ನು ಬಲಿಕೊಟ್ಟು, ಅವಕಾಶಕ್ಕಾಗಿ ನಾನಾ ರಾಜಿ ಮಾಡ ಕೊಂಡು, ಇವತ್ತು "ದ್ರಾಕ್ಷಿ ಹುಳಿ" ಎಂದು ಅಳುವುದು ಏಕೆ?
@prajavani
Prajavani
1 year
ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ನೀಡುವ ವಿಚಾರದಲ್ಲಿ ತಮಿಳರನ್ನು ನೋಡಿ ಕಲಿಯಬೇಕು: ದೇವೇಗೌಡ #HDDevegowda #RegionalParty #Tamils #KarnatakaAssemblyElection2023 #politics @mkstalin
105
61
505
15
20
163
@PrahladKH1
Prahlad K H, President, Bharatha Surachana Mandala
1 year
ಬಿಜೆಪಿ: ಪೂರ್ಣ ಕುರೂಪದಲ್ಲಿ ಮತ ಬೇಟೆ! ಮುಸ್ಲಿಮ ವಿರೋಧ. ಕನ್ನಡದ ಮೇಲೆ ಹಿಂದಿ ಸವಾರಿ. ಕನ್ನಡಿಗರ ಕಾಸು-ಕೆಲಸ ಉತ್ತರ ಭಾರತದವರಿಗೆ. ಮುಂದುವರಿದ ಬಲಿಷ್ಠ ಜಾತಿಗಳಿಗೆ ಸರ್ವ ಬೆಂಬಲ. ದಲಿತ ಮತ್ತು ಹಿಂದುಳಿದವರ ಮೂಗಿಗೆ ತುಪ್ಪ. ಸ್ಥಳೀಯರ ಪರಿಚಿತ ಬದುಕನ್ನು ನಿಯಂತ್ರಿಸುವ ದೂರದ ಅಪರಿಚಿತರ ಹೈಕಮಾಂಡ್. ಈ ಬಾರಿ ಬಿಜೆಪಿ ಗೆದ್ದರೆ ಅಷ್ಟೇ!
Tweet media one
2
38
162
@PrahladKH1
Prahlad K H, President, Bharatha Surachana Mandala
4 years
ಕನ್ನಡದ ಮೊದಲ ಶಿಲಾಶಾಸನ ಪ್ರತಿಕೃತಿಯಿರುವ ಹಲ್ಮಿಡಿ ಗ್ರಾಮ, ಚಿಕ್ಕಮಗಳೂರು.
Tweet media one
Tweet media two
Tweet media three
Tweet media four
5
26
152
@PrahladKH1
Prahlad K H, President, Bharatha Surachana Mandala
2 years
@siddaramaiah ರವರಿಗೆ ಮತ್ತೊಂದು ಅವಕಾಶ ನೀಡದಿದ್ದಕ್ಕೆ ನಾಡಜನರಲ್ಲಿ ಅಪರಾಧ ಪ್ರಜ್ಞೆ ಕಾಡುತ್ತಿದೆಯೇ? ಕರೋನ ಕಾಲದಲ್ಲಿ ಅನ್ನಭಾಗ್ಯದ ಮಹಿಮೆ ಅರಿವಾದ ಮೇಲೆ, ಬಿಜೆಪಿ ಸರ್ಕಾರದ ಆಡಳಿತ ವೈಖರಿ ನೋಡಿದ ಮೇಲೆ, ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದ ಸಿದ್ಧರಾಮಯ್ಯರವರೇ ಮತ್ತೆ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಭಾವನೆ ಸೃಷ್ಟಿಯಾಗುತ್ತಿದೆಯೆ?
Tweet media one
26
18
149
@PrahladKH1
Prahlad K H, President, Bharatha Surachana Mandala
2 years
"ಸಕಾರಣವಿಲ್ಲದೆ ಮೋದಿ ಸರ್ಕಾರವನ್ನು ಹೊಗಳುವುದು" ಎಂಬುದು ಪ್ರಸಿದ್ಧ ಮುದಿ ಬ್ರಾಹ್ಮಣರಿಗೆ ಇತ್ತೀಚೆಗೆ ಬರುತ್ತಿರುವ ಅಂಟುಜಾಡ್ಯ! ಉದ್ಯೋಗಿ ದುಡಿದ ಐದನೇ ಒಂದು ಭಾಗವನ್ನು ಸಂಬಳವಾಗಿ ನೀಡಿ, ಅಂದಿನ ಸರ್ಕಾರಗಳ ತೆರಿಗೆ ವಿನಾಯಿತಿ/ಸೌಲಭ್ಯಗಳನ್ನು ಪಡೆದು, ಅಗ್ಗವಾಗಿದ್ದ ಭೂಮಿ ಇತರ ಪರಿಕರಗಳಿಂದ ದೈತ್ಯರಾದವರಿಗೆ ಸಭ್ಯತೆ ತಿಳಿಸಿ ಕೊಡಬೇಕಾಗಿದೆ!
@prajavani
Prajavani
2 years
ಯುಪಿಎ ಕಾಲದಲ್ಲಿ ಭಾರತದ ಆರ್ಥಿಕ ಚಟುವಟಿಕೆ ಸ್ಥಗಿತವಾಗಿತ್ತು: ನಾರಾಯಣಮೂರ್ತಿ #Infosys #NarayanaMurthy #India #Economy #UPA #Congress #China #ManmohanSingh
53
23
181
17
31
152
@PrahladKH1
Prahlad K H, President, Bharatha Surachana Mandala
3 years
ನನ್ನದೊಂದು ಆಲೋಚನೆ ಹೆಚ್ಚು ಪ್ರಚಾರ ಯೋಗ್ಯ ಎಂದು ಪರಿಗಣಿಸಿ ಬಹುತೇಕ ಕನ್ನಡಿಗರಿಗೆ ತಲುಪಿಸಿದ @prajavani ಸಂಪಾದಕೀಯ ಬಳಗಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
@prajavani
Prajavani
3 years
#TweetOfTheDay #ದಿನದಟ್ವೀಟ್‌
Tweet media one
4
15
219
7
9
145
@PrahladKH1
Prahlad K H, President, Bharatha Surachana Mandala
3 years
ಟ್ವಿಟ್ಟರ್ ನಲ್ಲಿ ಅಂಬೇಡ್ಕರ್ ಆರಾಧನೆ ಚೆನ್ನಾಗಿಯೇ ನಡೆಯುತ್ತಿದೆ! ವಿಶೇಷವಾಗಿ ದಲಿತ ವಿದ್ಯಾವಂತ ಹಾಗೂ ಉದ್ಯೋಗಸ್ಥರಲ್ಲಿ ಒಂದು ಮನವಿ! ನೀವು ಪ್ರತಿಯೊಬ್ಬರೂ, ನಿಮ್ಮ ಚೈತನ್ಯಕ್ಕೆ ಅನುಗುಣವಾಗಿ 1 ಅಥವಾ 10 ಅಥವಾ 100 ಅಥವಾ 1000, ರಂತೆ, ಅವಕಾಶ ವಂಚಿತ ಇತರ ದಲಿತ ಕುಟುಂಬಗಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ತರಲು ಸಂಕಲ್ಪ ಮಾಡಿ!
Tweet media one
6
16
142
@PrahladKH1
Prahlad K H, President, Bharatha Surachana Mandala
4 months
ಭೂತ ಏನೇ ಇರಲಿ, ಉಳಿದ ೨೭ ಜನ ಎಲ್ಲಾ ಮುಚ್ಚಿಕೊಂಡು ಸುಮ್ಮನಿದ್ದಾಗ, ರಾಜ್ಯದ ಪರವಾಗಿ ಸ್ಪಷ್ಟ ನಿಲುವು ತಳೆದು ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದ @DKSureshINC ರಾಜ್ಯದ ಭವಿಷ್ಯದ ದೃಷ್ಟಿಯಿಂದ ಗೆಲ್ಲಬೇಕಾಗಿದೆ! ಇವರ ಎದುರು ನಿಂತಿರುವ ದೇವಮಾನವ @DrCNManjunath ರನ್ನು ಸಧ್ಯಕ್ಕೆ ನಿರ್ಲಕ್ಷ್ಯ ಮಾಡೋಣ!
Tweet media one
32
23
154
@PrahladKH1
Prahlad K H, President, Bharatha Surachana Mandala
4 years
ಈಗಿನ ಕೆಟ್ಟ ಸ್ಥಿತಿಯಲ್ಲಿ ಸ್ವಲ್ಪವಾದರೂ ಕೊಡುಗೆ ನೀಡಿರುವ ನಾಡಿನ ಹತ್ತು ಅತ್ಯುತ್ತಮ ರಾಜಕಾರಣಿಗಳನನ್ನ ನೆನಪಿಸಿಕೊಳ್ಳುವ: 1. ಡಿ ದೇವರಾಜ ಅರಸ್ 2. ಶಾಂತವೇರಿ ಗೋಪಾಲಗೌಡ 3. ಎಸ್ ನಿಜಲಿಂಗಪ್ಪ 4. ಕೆಂಗಲ್ ಹನುಮಂತಯ್ಯ 5. ಬಿ ಡಿ ಜತ್ತಿ 6. ರಾಮಕೃಷ್ಣ ಹೆಗಡೆ 7. ನಜೀರ್ ಸಾಬ್ 8. ಎಚ್ ಜಿ ಗೋವಿಂದೇಗೌಡ 9. ಎಸ್ ಎಂ ಕೃಷ್ಣ 10. ಸಿದ್ದರಾಮಯ್ಯ
22
20
143
@PrahladKH1
Prahlad K H, President, Bharatha Surachana Mandala
4 years
ನಮಗೆ ಕುಟುಂಬ ರಾಜಕಾರಣ ಬೇಡ. ನಮಗೆ ಧರ್ಮ ರಾಜಕಾರಣ ಬೇಡ. ನಮಗೆ ಜಾತಿ ರಾಜಕಾರಣ ಬೇಡ. ನಮಗೆ ಕನ್ನಡಿಗರ ರಾಜಕೀಯ ಬೇಕು! ನಮಗೆ ಕರ್ನಾಟಕ ರಾಜಕೀಯ ಬೇಕು! ನಮಗೆ ಕನ್ನಡ ರಾಜಕೀಯ ಬೇಕು! ನಮಗೆ ಸಮಾನತೆಯ ರಾಜಕೀಯ ಬೇಕು! ನಮಗೆ ಸ್ವಚ್ಚ ರಾಜಕೀಯ ಬೇಕು! ನಿಮ್ಮಿಂದ ಸಾಧ್ಯವೇ? @BSYBJP @siddaramaiah @hd_kumaraswamy ಇಲ್ಲದಿದ್ದರೆ ದಾರಿ ಬಿಡಿ!
5
39
146
@PrahladKH1
Prahlad K H, President, Bharatha Surachana Mandala
8 months
ಅನ್ನಪೂರ್ಣಿ: ನೋಡಬಹುದಾದ ಸಿನೆಮಾ! ಪೊಂಗಲ್-ಪುಳಿಯೋಗರೆ ಪ್ರಸಾದ ಮಾಡುವ ಸಂಪ್ರದಾಯಸ್ಥ ಬ್ರಾಹ್ಮಣ ಹೆಣ್ಣುಮಗಳು ಮೀನು-ಮಾಂಸದ ತಿಂಡಿಗಳನ್ನು ಕೂಡ ಅಧ್ಭುತವಾಗಿ ಮಾಡಿ ಕಾರ್ಪೊರೇಟ್ ಶೆಪ್ ಆಗುವ ಕಥೆಯನ್ನು ಹೇಳಲಾಗಿದೆ! ಮಗಳಾಗಿ @NayantharaU ತಾನು ನಟಿ ಕೂಡ ಅಂತ ನಿರೂಪಿಸಿದ್ದಾರೆ! ತಂದೆಯಾಗಿ ಅಚ್ಯುತ್ ಕುಮಾರ್ ಮತ್ತೆ ಉತ್ತಮ ನಟಿಸಿದ್ದಾರೆ!
Tweet media one
22
14
150
@PrahladKH1
Prahlad K H, President, Bharatha Surachana Mandala
4 years
@H_D_Devegowda @PMOIndia @CMofKarnataka @CMOKerala Sir, I am stunned by your generosity! I am speechless!
11
4
137
@PrahladKH1
Prahlad K H, President, Bharatha Surachana Mandala
3 years
#ಜಾತಿ_ಚಿಂತನೆಗಳು - ೨ ಒಕ್ಕಲಿಗರು: "ಗೌಡ" ಉಪನಾಮವನ್ನು ತಿರಸ್ಕರಿಸಲಿ! ಸಾಕಷ್ಟು ಅನುಕೂಲಸ್ಥರಿರುವ, ಇಡೀ ಮಾಂಸ ತಿನ್ನುವ ಜನಾಂಗಗಳ ಸಹಜ ನಾಯಕರಾಗಬೇಕಿದ್ದ ಈ ಜನ, ತಮ್ಮ ಜಾತಿಗೆ ಮಾತ್ರ ಸೀಮಿತವಾಗದೇ, ವಿಶ್ವಮಾನವ ಕುವೆಂಪುರವರ ತತ್ವಗಳ ಮಾರ್ಗದರ್ಶನದಲ್ಲಿ, ಕೆಂಪೇಗೌಡರ ರೀತಿ ಉಳಿದ ಎಲ್ಲಾ ಜಾತಿಗಳ ಉತ್ಥಾನಕ್ಕೆ ನಾಡ ಕಟ್ಟವ ಕಾಯಕ ಮಾಡಲಿ!
15
18
133
@PrahladKH1
Prahlad K H, President, Bharatha Surachana Mandala
1 year
#ಕರ್ನಾಟಕ_ಚುನಾವಣೆ_೨೦೨೩_ಸೋಲಬೇಕಾದವರು ಚಿಕ್ಕಮಗಳೂರು ಕ್ಷೇತ್ರ: ಬಹು ಭಂಗಿಯ ವಿದೂಷಕ @CTRavi_BJP ! ಕ್ಷೇತ್ರದ ಜನತೆಯ ಬೌದ್ಧಿಕತೆಗೆ ನಿರಂತರ ಸವಾಲ್ ಹಾಕುವ ಈತ, ಈ ಬಾರಿ ಠೇವಣಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚು! ನಾನಾ ಕಾರಣಕ್ಕಾಗಿ ಕೋಪಗೊಂಡಿರುವ ಬಹು ಸಂಖ್ಯಾತ ಕುರುಬ, ಲಿಂಗಾಯಿತ ಹಾಗೂ ಒಕ್ಕಲಿಗ ಸಮಾಜಗಳು ಈ ಬಗ್ಗೆ ಖಚಿತವಾಗಿವೆ!
Tweet media one
16
25
137
@PrahladKH1
Prahlad K H, President, Bharatha Surachana Mandala
4 years
ಆತ್ಮೀಯರೇ, ಕನ್ನಡ, ಕನ್ನಡಿಗರು ಮತ್ತು ಕರ್ನಾಟಕದ ಬಗ್ಗೆ ಪಕ್ಷ/ಧರ್ಮ/ಜಾತ್ಯಾತೀತವಾಗಿ ಚಿಂತನೆ, ವಿಚಾರ ಮತ್ತು ವಿಮರ್ಶೆಗಳ ವೇದಿಕೆಯಾಗಿ, ಸ್ಪಷ್ಟ ನಿಲುವುಗಳನ್ನು ರೂಪಿಸವ ಉದ್ದೇಶದಿಂದ ತಜ್ಣರ ಮತ್ತು ವಿಚಾರವಂತರ ಲೇಖನಗಳನ್ನು, ಅನಿಯತಕಾಲಿಕವಾಗಿ ಪ್ರಕಟಿಸಬೇಕೆಂದು ತೀರ್ಮಾನಿಸಿದ್ದೇವೆ. ಈ ಮೊದಲ ಲೇಖನ ಇಷ್ಟವಾದರೆ ಹಂಚಿಕೊಳ್ಳಿ!
Tweet media one
Tweet media two
Tweet media three
Tweet media four
15
54
124
@PrahladKH1
Prahlad K H, President, Bharatha Surachana Mandala
1 year
ರೀ @krishnabgowda ರೇ, ನೀವು ಕೆಲವು ವರ್ಷಗಳು ಮಾತ್ರ ಯುಎಸ್ಎನಲ್ಲಿ ಬದುಕಿದ್ದಿರಬಹುದು! ನಾನು ಮೂವತ್ತು ವರ್ಷ ಯೂರೋಪ್-ಯುಎಸ್ಎನಲ್ಲಿ ಬದುಕಿದ್ದೆ ಅಥವಾ ಅವರ ಜೊತೆ ಕೆಲಸ ಮಾಡಿರುವೆ! ಈಗ ಕನ್ನಡದಲ್ಲಿ ಟ್ವೀಟ್ ಮಾಡುತ್ತಿಲ್ಲವೇ? ಇಂಗ್ಲೀಷ್ನಲ್ಲಿ ಯಾರಿಗಾಗಿ ಟ್ವೀಟ್ ಮಾಡುವಿರಿ? ತಕ್ಷಣ ಕನ್ನಡದಲ್ಲಿ ಟ್ವೀಟ್ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ
@krishnabgowda
Krishna Byre Gowda
1 year
My review meeting with Mysore Division Revenue Department lasted 8 hours with Tahsildar, Assistant commisioner and District Collector. My Instructions are to clear pending dispute cases within three months and provide pro-people governance. #revenuminister #govtofkarnataka
Tweet media one
Tweet media two
27
24
136
5
34
125
@PrahladKH1
Prahlad K H, President, Bharatha Surachana Mandala
5 years
ಟ್ವಿಟ್ಟರ್ ನಲ್ಲಿರುವ ಖ್ಯಾತ ಕನ್ನಡಿಗರೇ, 2019 ಇಂದಿಗೆ ಮುಗಿಯುತ್ತದೆ. ನಾಳೆಯಿಂದ, 1.1.2020 ರಿಂದ, ಹೊಸ ವರ್ಷದಿಂದ ಕನ್ನಡದಲ್ಲೇ ಟ್ವೀಟ್ ಮಾಡುವ ಸಂಕಲ್ಪ ಮಾಡಿ ಕನ್ನಡ ಉದ್ಧಾರ ಆಂದೋಲನಕ್ಕೆ ಜೊತೆಯಾಗಿ! ಉಳಿದ ಟ್ವಿಟ್ಟರ್ ಸಂಗಾತಿಗಳೇ, ಈ ಟ್ವೀಟ್ ಅನ್ನು ಆದಷ್ಟೂ ಖ್ಯಾತ ಕನ್ನಡಿಗರಿಗೆ ತಲುಪಿಸಿ ಪುಣ್ಯ ಕಟ್ಟಿಕೊಳ್ಳಿ! ಕನ್ನಡವೇ ಸತ್ಯ!
3
31
109
@PrahladKH1
Prahlad K H, President, Bharatha Surachana Mandala
1 year
ಈಗ ಕರ್ನಾಟಕಕ್ಕೇ ಒಬ್ಬ ಕಡಕ್ ಗೃಹ ಮಂತ್ರಿ ಬೇಕು! ನಿಮ್ಮ ಆಯ್ಕೆ ಯಾರು?
124
3
120
@PrahladKH1
Prahlad K H, President, Bharatha Surachana Mandala
3 years
ಶ್ರೀ ಜಲ ಅಭಯ ಆಂಜನೇಯಸ್ವಾಮಿ ಗುಡಿ, ಪೆನುಕೊಂಡ, ಅನಂತಪುರಂ, ಆಂಧ್ರಪ್ರದೇಶ. ಶ್ರೀ ಕೃಷ್ಣ ದೇವರಾಯರ ಕಾಲದಲ್ಲಿ ಕಟ್ಟಿದ, ಎಂದೂ ಬತ್ತದ ಪಸರೋಕ್ಕರಿ ಬಾವಿಯೊಳಗೆ, ಶ್ರೀ ವ್ಯಾಸರಾಜರು ಈ ಅಧ್ಭುತ ದೇವಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಸುಮಾರು ಒಂದು ಶತಮಾನದ ಕಾಲ ಕಸದಿಂದ ತುಂಬಿಹೋಗಿದ್ದ ಈ ದೇವಸ್ಥಳವನ್ನು 2017 ರಲ್ಲಿ ಶುಚಿ ಗೊಳಿಸಲಾಗಿದೆ!
Tweet media one
Tweet media two
Tweet media three
Tweet media four
1
26
126
@PrahladKH1
Prahlad K H, President, Bharatha Surachana Mandala
2 years
@Jaggesh2 @narendramodi ಕನಿಷ್ಠ ಜ್ಞಾನ ಇಲ್ಲದ ಮಾತುಗಳು ಜಗ್ಗೇಶ್ ರವರೇ! ನೀವು, ಮೋದಿ, ಸಿದ್ಧರಾಮಯ್ಯ ಮತ್ತು ಎಲ್ಲಾ ರಾಜಕೀಯ ನಾಯಕರಿಗೂ ಅನ್ನ ಹಾಕುತ್ತಿರುವವರು ಭಾರತೀಯರು/ಕನ್ನಡಿಗರು! ಎಚ್ಚರದಿಂದ ಜವಾಬ್ದಾರಿಯ ಮಾತುಗಳು ಆಡಿದರೆ, ಕಲಾವಿದರಿಗೆ ಸಿಕ್ಕ ಮರ್ಯಾದೆ ಉಳಿಸಿಕೊಳ್ಳಬಹುದು! ಇಲ್ಲದಿದ್ದರೆ ವ್ಯರ್ಥ ಜೀವಿಯಾಗಿ ಬದುಕಬಹುದು!
6
13
123
@PrahladKH1
Prahlad K H, President, Bharatha Surachana Mandala
1 year
@astitvam ನೀ ಯಾವೂರಾ ದಾಸಯ್ಯ ಅಂತ ನಿನ್ನ ಅಭಿನಂದನೆಗಳನ್ನು ಸ್ವೀಕರಿಸೋಣ?
12
6
117
@PrahladKH1
Prahlad K H, President, Bharatha Surachana Mandala
3 years
ಕೊನೆಗೂ ಒಕ್ಕೂಟದ ಮಂತ್ರಿಯಾಗಿದ್ದಾರೆ @ShobhaBJP ! ಬ್ರಾಹ್ಮಣ ಪುರುಷ ಪ್ರಧಾನವಾದ ಆರ್ ಎಸ್ ಎಸ್ / ಬಿಜೆಪಿಯಲ್ಲಿ ಒಬ್ಬ ವಕ್ಕಲಿಗ ಹೆಣ್ಣು ಮಗಳು ಕೇವಲ ಸ್ನೇಹ - ಸಂಬಂಧಗಳ ಮೂಲಕವೇ ದೀರ್ಘಕಾಲ ಪ್ರಮುಖವಾಗಿರಲು ಸಾಧ್ಯವಿಲ್ಲ! ಇನ್ನಾದರೂ ಈಕೆ ಬೀದಿ ಕಾರ್ಯಕರ್ತೆಯ ಶೈಲಿ ಬಿಟ್ಟು ರಾಜ್ಯ ಮತ್ತು ದೇಶದಲ್ಲಿ ತಮ್ಮ ಹೆಸರು ಉಳಿಯುವಂಥ ಕೆಲಸ ಮಾಡಲಿ!
Tweet media one
5
11
114
@PrahladKH1
Prahlad K H, President, Bharatha Surachana Mandala
1 year
I request all income tax paying Kannadigas to demand Kannada implementation by tweeting to @IncomeTaxIndia and @nsitharaman @narendramodi @siddaramaiah @DKShivakumar .
@PrahladKH1
Prahlad K H, President, Bharatha Surachana Mandala
1 year
Kannada does not exist for the @IncomeTaxIndia of India! We earn in Karnataka and we pay Lakhs of rupees of income tax and get replies in Hindi and English! Total nonsense! When will I get replies in Kannada Madam and Sir? @nsitharaman @narendramodi @siddaramaiah @DKShivakumar
Tweet media one
Tweet media two
21
97
301
2
63
117
@PrahladKH1
Prahlad K H, President, Bharatha Surachana Mandala
4 years
@narendramodi We reciprocate Republic Day Greetings Sir! To be the true PM of this country, please take a serous look at the enclosed languages of India map. We would like to be governed in our language. Do not address us in English/Hindi! Every non-Kannada communication is an assault on us!
Tweet media one
33
2
116
@PrahladKH1
Prahlad K H, President, Bharatha Surachana Mandala
2 years
ಯಾರೀ ಹೊಸ ವ್ಯರ್ಥ ಜೀವಿ? ಈತನ ಒಡಕು ಶಬ್ದ ಬಹಳ ಕೀರಲಾಗಿದೆ!
@KirikKeerthi
ಕಿರಿಕ್ ಕೀರ್ತಿ - Kirik Keerthi
2 years
'ಆಜಾದಿ' ಅನ್ನೋರು ಸಿನಿಮಾ ನೋಡ್ರಪ್ಪ ಹೋಗಿ... ಥಿಯೇಟ್ರಲ್ಲಿ ಕೂಗಿ ಆಜಾದಿ ಅಂತ... ನೋಡೇ ಬಿಡೋಣ... #thekashmirfilesmovie #KashmirFiles #thekashmirfiles #thekashmirfilesreview #kirikkeerthi
123
26
188
17
6
112
@PrahladKH1
Prahlad K H, President, Bharatha Surachana Mandala
3 years
ರಾಜಕುಮಾರ್ ಪ್ರತಿನಿಧಿಸುವ ಮೌಲ್ಯಗಳು: ೧. ವೃತ್ತಿ ನೈಪುಣ್ಯತೆ. ೨. ಕನ್ನಡ-ಕನ್ನಡಿಗ-ಕರ್ನಾಟಕದ ಬದ್ಧತೆ. ೩. ಜೀವನದಲ್ಲಿ ತೋರಿದ ಕೌಟುಂಬಿಕ ಮೌಲ್ಯಗಳು. ೪. ರಾಜಕೀಯ ನಿರ್ಲಕ್ಷ್ಯತೆ/ನಿರಪೇಕ್ಷತೆ. ೫. ಅಭಿಮಾನಿ ದೇವರ ಕಲ್ಪನೆ. ೬. ಸಾರ್ವಜನಿಕ ವಿನಯವಂತಿಕೆ. ೭. ಕೈಲಾದಷ್ಟು ಅವಕಾಶ ವಂಚಿತರ ಸೇವೆ. ೮. ದೇವರಲ್ಲಿ ನಂಬಿಕೆ. ೯. ವರ್ಣರಂಜಿತ ಜೀವನ
Tweet media one
4
12
109
@PrahladKH1
Prahlad K H, President, Bharatha Surachana Mandala
3 years
ಅಸಮ ವ್ಯಕ್ತಿಗಳ ಚರ್ಚೆ! @hd_kumaraswamy ರವರೇ, @astitvam ಒಬ್ಬ ವೃತ್ತಿವಂತ ಬಾಡಿಗೆ ಬುರುಡೆಗಾರ! ಈತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಒಳಗಾಗಿರುವ ವ್ಯಕ್ತಿ! ನೀವು ಇಂತವರ ಜೊತೆ ವಾದಕ್ಕೆ ನಿಲ್ಲುವುದು ಸಲ್ಲದು! ಚರ್ಚೆ ಸಮಾನ ಮಟ್ಟದವರ ಜೊತೆ ನಡೆದರೆ ಭೂಷಣ! ನೀವು @Kanagalogy ಅಥವ @kbsgowda ರಿಂದ ಕೇಳಿ ತಿಳಿಯಿರಿ!
Tweet media one
5
17
116
@PrahladKH1
Prahlad K H, President, Bharatha Surachana Mandala
3 years
ಪಿ ಲಂಕೇಶ್: ಸಮಾಜದ ಸಮತೋಲನಗಾರ! ಅಧಿಕಾರಸ್ಥರು, ಹಣವಂತರು, ಪ್ರಸಿದ್ಧ ವ್ಯಕ್ತಿಗಳು ಸಮಾಜವನ್ನು ಹೈಜಾಕ್ ಮಾಡುವುದನ್ನು ತಪ್ಪಿಸಿ, ತನ್ನ ಕಾಲದಲ್ಲಿ ಜನತಂತ್ರದ ಬಿಚ್ಚುಗತ್ತಿ ಕಾವಲುಗಾರನಂತೆ ಕೆಲಸ ಮಾಡಿ, ಸಮಾಜದ ಸಮತೋಲನೆ ಕಾಪಾಡಿದವರು ಪತ್ರಕರ್ತ ಲಂಕೇಶ್! ಸ್ಮರಣೆಯ ದಿನ, ಈಗ ಇವರು ಇರಬಾರದಿತ್ತೆ ಅನ್ನಿಸುವುದು ಸಹಜ! ಅವರನ್ನು ಮತ್ತೆ ಓದುವ!
Tweet media one
5
20
113
@PrahladKH1
Prahlad K H, President, Bharatha Surachana Mandala
2 years
@H_D_Devegowda ಎಂ ಟೆಕ್ ಮಾಡಿದ, ನನ್ನ ಮಿತ್ರರ ಸಹಪಾಠಿ, ಈ ಸ್ವಾಮೀಜಿ! ಇವರು ಪೀಠವೇರಿದಾಗ, ಕುವೆಂಪುರವರ ಆಶಯದಂತೆ ಆಧುನಿಕ ವಿಶ್ವಮಾನವ ಸಮಾಜ ಸೃಷ್ಟಿಸುವತ್ತ ಒಕ್ಕಲಿಗ ಸಮುದಾಯವನ್ನು ಮುನ್ನೆಡೆಸಬಹುದು ಎಂಬ ಆಶಯವಿತ್ತು! ಆದರೆ ಈತ ಕನ್ನಡ ಬಿಟ್ಟು ಸಂಸ್ಕೃತ, ವೈಚಾರಿಕ ದೈವಿಕತೆ ಬಿಟ್ಟು, ಕಂದಾಚಾರದ ಸನಾತನದತ್ತ ನಡೆಯುತ್ತಿರುವುದು ಅತ್ಯಂತ ವಿಷಾದದ ಸಂಗತಿ!
6
13
116
@PrahladKH1
Prahlad K H, President, Bharatha Surachana Mandala
3 years
"ಯುವರತ್ನ" ಸಿನೆಮಾ, ಒಂದು ಸಮಸ್ಯೆ ಬಗ್ಗೆ ಯಾವ ರೀತಿ ಸಿನೆಮಾ ಮಾಡಬಾರದು ಎಂಬುದಕ್ಕೆ ಉದಾಹರಣೆ! ಸಾವಿರಾರು ಕಲಾವಿದರನ್ನು ಹಾಕಿಕೊಂಡರೂ ವಾಚಾಳಿ ಹಾಗೂ ತಲೆಬರಹದ ಮಟ್ಟದಲ್ಲೇ ಚಿತ್ರಕಥೆ ಉಳಿದಿದೆ. ನಿರ್ದೇಶಕರಿಗೆ ಸಿನೆಮಾ ಕಲೆ ಮತ್ತು ವಿಜ್ಞಾನ ಎರಡೂ ಗೊತ್ತಿಲ್ಲ! ಪುನೀತ್ ಇನ್ನೂ ಮುಂದೆ ವರದರಾಜ್ ಅಂಥವರ ಸಹಾಯ ಪಡೆದು ಸಿನೆಮಾ ಒಪ್ಪಿಕೊಳ್ಳಲಿ!
Tweet media one
14
5
115
@PrahladKH1
Prahlad K H, President, Bharatha Surachana Mandala
2 years
ಗೌರವ ಡಾಕ್ಟರೇಟನ್ನು ರದ್ದು ಪಡಿಸಿ! ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಹೆಚ್ಚಾಗಿ, ಅವೆಲ್ಲಾ ಪ್ರತಿವರ್ಷ ಮೂವರಿಗೆ ಡಾಕ್ಟರೇಟ್ ನೀಡಬೇಕೆಂಬ ಮರ್ಜಿಗೆ ಬಿದ್ದು, ಘನತೆ-ಸಾಧನೆಯ ಶ್ರೇಷ್ಠತೆಯನ್ನು ಅಳೆಯದೇ ಸಿಕ್ಕ ಸಿಕ್ಕವರಿಗೆಲ್ಲಾ ಈ ಗೌರವ ಪದವಿ ನೀಡಿ ಪರಿಹಾಸ್ಯಕ್ಕೆ ಗುರಿಯಾಗುತ್ತಿವೆ! ಹಾಗಾಗಿ ಈ ಪದವಿಯನ್ನು ರದ್ದು ಪಡಿಸುವುದು ಒಳ್ಳೆಯದು?
2
11
108
@PrahladKH1
Prahlad K H, President, Bharatha Surachana Mandala
1 year
ರೀ @JoshiPralhad , ನಿಮಗೆ ಈ ಕಾಲಕ್ಕೆ ಬುದ್ಧಿ ಬರದು! ನಮ್ಮ ಕನ್ನಡ ಸಂಸ್ಕೃತಿ ಬೇರೆ, ಮರಾಠ ಸಂಸ್ಕೃತಿ ಬೇರೆ. ಅಲ್ಲಿಯ ಒಬ್ಬ ರಾಜನ ಬಗ್ಗೆ ನೀವು ನಮಗೇಕೆ ಕನ್ನಡದಲ್ಲಿ ಟ್ವೀಟ್ ಮಾಡಬೇಕು? ಬೇಕಾದರೆ ಮರಾಠಿಯಲ್ಲಿ ಟ್ವೀಟ್ ಮಾಡಿಕೊಳ್ಳಿ! ಇದು ಹೀಗೆ ಮುಂದುವರೆದರೆ, ಮುಂದಿನ ಚುನಾವಣೆಯಲ್ಲಿ ಕನ್ನಡಿಗರು ನಿಮಗೆ ಠೇವಣಿ ಬರದಂತೆ ಮಾಡುತ್ತಾರೆ!
@JoshiPralhad
Pralhad Joshi
1 year
ಮರಾಠ ಸಾಮ್ರಾಜ್ಯದ ರಾಜರಾಗಿ ದೇಶದ, ಸಂಸ್ಕೃತಿ ಹಾಗೂ ಪರಂಪರೆಯ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಶ್ರೀ ಸಂಭಾಜಿ ಮಹಾರಾಜರ ಜಯಂತಿಯ ಶುಭಾಶಯಗಳು.
Tweet media one
220
171
406
6
19
112
@PrahladKH1
Prahlad K H, President, Bharatha Surachana Mandala
2 years
ಬಗೆ ಹರಿಯದ ಬೆಂಗಳೂರು-ಮೈಸೂರು ಸುಗಮ ಹೆದ್ದಾರಿ ಬೇನೆಗಳು! @mepratap ರವರೇ, ಹತ್ತು ಸಾವಿರ ಕೋಟಿ ಖರ್ಚು ಮಾಡಿದರೂ ನಡುವೆ ಇರುವ ಪಟ್ಟಣಗಳಿಗೆ ಮೊದಲು ಬಾಗಿಲು ದಾರಿಗಳನ್ನು ಮಾಡದೆ ಜನರು ಎಲ್ಲಿಯೋ ಒಳ ಬಂದು ಎಲ್ಲೆಲ್ಲೋ ಹೊರ ಹೋಗಿ ತಮ್ಮ ಊರ ದಾರಿಯನ್ನು ತಾವೇ ಗುರುತು ಹಿಡಿಯದೇ ಒದ್ದಾಡುವ ಸನ್ನಿವೇಶ ಸೃಷ್ಟಿಯಾಗುತ್ತಿವೆ! ಮೊದಲು ಸರಿ ಪಡಿಸಿ!
Tweet media one
10
15
109
@PrahladKH1
Prahlad K H, President, Bharatha Surachana Mandala
1 year
ರೀ ಪ್ರದೀಪ್ ಈಶ್ವರ್ ಸ್ನೇಹಿತರು ಸುಧಾಕರ್ ರವರನ್ನು ಸೋಲಿಸಿದ ಹುಡುಗ ಇವರೇ ಅಂತ ನಿಮ್ಮ ಕೆಲವು ವಿಡಿಯೋಗಳನ್ನು ತೋರಿಸಿದರು. ಆಗ ನೀವು ಹುಚ್ಚ ವೆಂಕಟೇಶ್ ೨.೦ ಆಗುವ ಸಾಧ್ಯತೆ ಇದೆ ಅನ್ನಿಸಿತು! ಹಿಂದುಳಿದ ವರ್ಗದ ನೀವು, ಸಂಗಿಗಳ ಸಹವಾಸ ಬಿಟ್ಟು ಘನತೆಯ ಮಾತುಕತೆ ರೂಪಿಸಿಕೊಂಡು ವರ್ತಿಸಿ! @pradeepeshwar2 @PNimmondige @eshwar_pradeep
Tweet media one
16
9
108
@PrahladKH1
Prahlad K H, President, Bharatha Surachana Mandala
1 year
ಶ್ರೀ ಕೆಂಪೇಗೌಡರ ಜಯಂತಿ: ಎಲ್ಲರ ಹಬ್ಬವಾಗಲಿ! ಎಲ್ಲರಿಗಾಗಿ ನಗರ ಕಟ್ಟಿದ ಈ ಗೌಡರು ಖಂಡಿತ ಒಕ್ಕಲಿಗರ ಸೊತ್ತಲ್ಲ! ಒಕ್ಕಲಿಗರ ಸೊತ್ತಾಗಬಾರದು! ಇಂಥ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸಿದರೆ ಅದು ಆ ದೊಡ್ಡ ವ್ಯಕ್ತಿಯ ಘನತೆಗೆ ಕುಂದು. ಜಯಂತಿಯಲ್ಲಿ ಕೇವಲ ಒಕ್ಕಲಿಗ ಗುರುಗಳನ್ನು ಸೇರಿಸುವುದು ಸರಿಯಲ್ಲ! ಜಯಂತಿ ಮಾಡುವ ರೀತಿ ಬದಲಾಗಲಿ!
Tweet media one
3
16
106
@PrahladKH1
Prahlad K H, President, Bharatha Surachana Mandala
2 years
@Sachchi39333829 ಕಾಗೆ ಜನ್ಮವೆಲ್ಲಾ ಅಭ್ಯಾಸ ಮಾಡಿದರೂ ಕೋಗಿಲೆ ತರ ಹಾಡಲು ಆಗದು! ಜ್ಞಾನಿಗಳಿಗೆ ಒಂದು ವಿಷಯವನ್ನು ತಿಳಿಯಲು ಒಂದು ಜನ್ಮ ಬೇಕಿಲ್ಲ! ದೇವನೂರ ಮಹಾದೇವ ಕೇಂದ್ರ ಸಾಹಿತ್ಯ ಪ್ರಶಸ್ತಿ ಪಡೆದ ಒಬ್ಬ ಶ್ರೇಷ್ಠ ಚಿಂತಕ ಹಾಗೂ ಲೇಖಕ. ಅವರನ್ನು ಹೇಗೆ ಸಂಭೋಧಿಸಬೇಕೆಂದು ಕೂಡ ಗೊತ್ತಿಲ್ಲದ ಮಡೆಯ ಕರ್ಮಠ ಕಂದಾಚಾರಿ ನೀವು. ನಿಮಗೆ ದೊಡ್ಡವರ ಸಹವಾಸ ಬೇಡ!
6
18
103
@PrahladKH1
Prahlad K H, President, Bharatha Surachana Mandala
3 years
ಸೆಪ್ಟೆಂಬರ್ 8: "ವ್ಯಕ್ತಿ ವಿಶಿಷ್ಟ ಸಿದ್ಧಾಂತ" ನೀಡಿದ ಕನ್ನಡದ ಶ್ರೇಷ್ಠ ಹಾಗೂ ಜನಪ್ರಿಯ ಸಾಹಿತಿ ಕೆ ಪಿ ಪೂರ್ಣಚಂದ್ರ ತೇಜಸ್ವಿ ಜನುಮ ದಿನ.
Tweet media one
0
9
104
@PrahladKH1
Prahlad K H, President, Bharatha Surachana Mandala
3 years
ಕನ್ನಡ-ಕನ್ನಡಿಗ-ಕರ್ನಾಟಕ ರಾಜಕಾರಣಕ್ಕೆ ಸಕಾಲ! ಕೇರಳ, ತಮಿಳುನಾಡು, ತೆಲಂಗಾಣ, ���ಂಧ್ರ ಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ದಿಲ್ಲಿಯಂತೆ ಕನ್ನಡನಾಡ ರಾಜಕಾರಣ ಮಾಡಲು ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಮತ್ತು ಇತರ ಸಂಘ-ಸಂಸ್ಥೆಗಳ ನೈಜ ನಾಯಕ/ನಾಯಕಿಯರು ತಮ್ಮ ಮೂಲ ಸಂಘಟನೆಯನ್ನು ತೊರೆದು, ಒಗ್ಗೂಡಲಿ. @prajavani
1
14
102
@PrahladKH1
Prahlad K H, President, Bharatha Surachana Mandala
4 months
@astitvam ಅನ್ನೋ ಬಾಡಿಗೆ ಬುರುಡೆ ದಾಸನ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಬರೋ ಪ್ರತಿ ಟ್ವೀಟ್ ನ ಓದೋದು ಒಂದು ಅಧ್ಭುತ ಮನರಂಜನೆ! ಈತ ಕನ್ನಡಿಗರು ಅಭೂತ ಪೂರ್ವ ಅಣಕವನ್ನು ಸೃಷ್ಟಿಸಲು ಪ್ರೇರಣೆಯಾಗಿದ್ದಾನೆ!
@astitvam
Chakravarty Sulibele
4 months
Value of your ONE Vote!!
221
283
1K
29
12
104
@PrahladKH1
Prahlad K H, President, Bharatha Surachana Mandala
4 years
ಸಹ ಭಾರತೀಯ ಪ್ರಜೆಗೆ ಒಂದು ಪ್ರಶ್ನೆ! ಮುಸ್ಲಿಮರ ವಿರೋಧವೇ ಸಾಕ್ಷಾತ್ಕಾರದ ದಾರಿ ಎನ್ನುವ ಬಿಜೆಪಿ! ನೆಹರು - ಇಂದಿರಾ ಕುಟುಂಬವೇ ಕೈವಲ್ಯದ ಮಾರ್ಗ ಎನ್ನುವ ಕಾಂಗ್ರೆಸ್! ಕುಟುಂಬದ ಉದ್ಧಾರವೇ ಮೋಕ್ಷದ ಹಾದಿ ಎನ್ನುವ ಪ್ರಾಂತೀಯ ಪಕ್ಷಗಳು! ಇವರ ನಡುವೆ ನಮಗೆ ಸಭ್ಯ ಹಾಗೂ ಸಹನೀಯ ಜೀವನಕ್ಕೆ ಪೂರಕವಾಗುವ ಸರ್ಕಾರ ಕೊಡುವ ಸುವರ್ಣ ಪಕ್ಷ ಎಲ್ಲಿ?
12
17
100
@PrahladKH1
Prahlad K H, President, Bharatha Surachana Mandala
4 years
ಈ ವಯಸ್ಸಿನಲ್ಲಿ ನನಗೆ ತೀರಾ ಆಪ್ತವಾಗಿ ಇಷ್ಟವಾಗುವ ವಿಷಯಗಳೆಂದರೆ: 1. ದೇವರು/ದೇವಾಲಯ 2. ಕೃಷಿ 3. ದಯಾಕಾರ್ಯಗಳು 4. ಇತಿಹಾಸ 5. ರಾಜಕೀಯ 6. ಸಾಹಿತ್ಯ 7. ಸಿನೆಮಾ 8. ಕಂಪ್ಯೂಟರ್ 9. ಅಂತರಿಕ್ಷದ ಆವಿಷ್ಕಾರಗಳು ನಿಮಗೆ ಯಾವ ವಿಷಯಗಳು ಆಪ್ತವಾಗಿ ಇಷ್ಟವಾಗುತ್ತಿವೆ?
24
5
99
@PrahladKH1
Prahlad K H, President, Bharatha Surachana Mandala
1 year
@KicchaSudeep ಕನಕದಾಸರ ಪದಗಳು ಮತ್ತು ಚರಿತ್ರೆ ಓದಿದ್ದೀರಾ? ಹಾಗೇ ಶಿಶುನಾಳರ ತತ್ವ ಪದಗಳು ಅರ್ಥ ಮಾಡಿಕೊಂಡಿದ್ದೀರಾ? ಜೊತೆ ಅರ್ಎಸ್ಎಸ್ ಮತ್ತು ಬಿಜೆಪಿ ತತ್ವ ಸಿದ್ಧಾಂತಗಳನ್ನು ಓದಿದ್ದೀರಾ! ಇಲ್ಲದಿದ್ದರೇ ತಕ್ಷಣ ಓದಿ!
Tweet media one
6
12
100
@PrahladKH1
Prahlad K H, President, Bharatha Surachana Mandala
3 years
2023 ರಲ್ಲಿ ಪ್ರಬಲ ಜೆಡಿಎಸ್ ಸರ್ಕಾರ: ಕಾರ್ಯಸೂಚಿ - 3 ಯಾವುದೇ ಕನ್ನಡ ಪರ ಸಂಘಟನೆಯನ್ನು ಮೀರಿಸುವಂತೆ, ಎಲ್ಲಾ ರಂಗಗಳು ಮತ್ತು ಆಯಾಮಗಳಲ್ಲಿ ಕನ್ನಡ ಜಾರಿ ಮಾಡುವಂತೆ ಅತಿರೇಕದ ಆದರೇ, ಕನ್ನಡಿಗರ ಅಂತರಂಗ ತಟ್ಟುವ ಹಾಗೆ ಆಂದೋಲನ ಆರಂಭಿಸುವುದು! @H_D_Devegowda @hd_kumaraswamy @hd_revanna @YSV_Datta @Kanagalogy @kbsgowda
3
17
98
@PrahladKH1
Prahlad K H, President, Bharatha Surachana Mandala
1 year
ರೀ @DKShivakumar , 7 ಕೋಟ ಕನ್ನಡಿಗರು ದಿಲ್ಲಿ ಬೀದಿ ನಾಟಕವನ್ನು ನೋಡುತ್ತಿದ್ದಾರೆ! @siddaramaiah ಇಲ್ಲದಿದ್ದರೇ ಕಾಂಗ್ರೇಸ್ ಗೆಲ್ಲುತ್ತಿರಲಿಲ್ಲ! ಅವರ ಮೇಲೆ ನಂಬಿಕೆ ಇಲ್ಲದಿದ್ದರೇ ಪಕ್ಷದ ಗ್ಯಾರಂಟಿಗಳಲ್ಲಿ ಅವರ ಫೋಟೋ ಹಾಗೂ ಸಹಿ ಏಕೆ ಪಡೆದಿರಿ! ನಿಮಗಿಂತ ಅವರು ಹಿರಿಯರು! ಅವರು ಮೊದಲು ಸಿಎಂ ಆಗಲಿ ಬಿಡಿ! ನಾಟಕವನ್ನು ಸುಖಾಂತ ಮಾಡಿ!
@PrahladKH1
Prahlad K H, President, Bharatha Surachana Mandala
1 year
ರೀ @DKShivakumar ಇದು ಮುತ್ಸದ್ಧಿಯಾಗುವ ಸಮಯ! ನಿಮ್ಮ ಗುರುಗಳಾದ ಎಸ್ ಎಂ ಕೃಷ್ಣ ಇಂಥಹ ಸನ್ನಿವೇಶ ಎದುರಿಸಿದ್ದರು! ನಂತರ ಯಶಸ್ವಿ ಮುಖ್ಯಮಂತ್ರಿಯಾದರು! ನಿಮಗಿಂತ ಹಿರಿಯರಾದ @siddaramaiah 2 ವರ್ಷಗಳು ಮತ್ತೆ ಮುಖ್ಯಮಂತ್ರಿಯಾಗಿ ಕೇಂದ್ರ ಚುನಾವಣೆ ಕಾಲದಲ್ಲಿ ಅಹಿಂದ ಕಾರಣವನ್ನು ಮುಂದಕ್ಕೆ ತರಲಿ! ಅರ್ಥ ಮಾಡಿಕೊಂಡು ಯಶಸ್ವಿ ನಾಯಕರಾಗಿ!
Tweet media one
3
5
52
14
21
97
@PrahladKH1
Prahlad K H, President, Bharatha Surachana Mandala
2 years
#ಕುರುಬರ_ಗುರುಗಳು_ಮಾಡಬೇಕಾದ_ಕಾರ್ಯಗಳು ಕುರುಬರೇ ಹೆಚ್ಚು ಸಂಖ್ಯೆಯಲ್ಲಿರುವ ಹಳ್ಳಿಗಳಲ್ಲಿ, ಹೆಣ್ಣು/ಗಂಡು ಮಕ್ಕಳಿಗೆ ಕನಕದಾಸರ ಗೀತೆಗಳ ಗಾಯನ ತರಬೇತಿ, ಅವರ ಜೀವನ ಮತ್ತು ಕೊಡುಗೆ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಹಾಗೂ ದೊಡ್ಡವರಿಗೆ ಕನಕದಾಸರ ವಿಚಾರ ಭೋಧನೆ, ಚರ್ಚೆ, ಚಿಂತನ ಮತ್ತು ಮಂಥನ ಶಿಬಿರಗಳನ್ನು ನಿರಂತರವಾಗಿ ಏರ್ಪಡಿಸುವುದು!
Tweet media one
7
11
96
@PrahladKH1
Prahlad K H, President, Bharatha Surachana Mandala
1 year
ರೀ @HC_Balakrishna ರವರೇ, ನಿಮಗೆ ಸಾರ್ವಜನಿಕ ಸಾಮಾನ್ಯ ಜ್ಞಾನ ಇದೆಯೇ? ಈ ಅರ್ನಾಬ್ ಗೋಸ್ವಾಮಿ ಬಿಜೆಪಿ/ಆರೆಸಸ್/ಹಿಂದುತ್ವ ಪರ ಯಾವ ಎಗ್ಗಿಲ್ಲದೇ ಬೊಗಳುವ ಹುಚ್ಚುನಾಯಿ ಎಂದು ದೇಶದಾದ್ಯಂತ ಕುಪ್ರಸಿದ್ಧ! INDIA ಒಕ್ಕೂಟ ಇವರನ್ನು ಬಹಿಷ್ಕಾರ ಮಾಡಿದೆ! ಇಂಥ ಚಾನಲ್ ಕನ್ನಡದಲ್ಲೂ ಬೇಕೆ? ಸ್ವಾಗತ ಯೇಕೆ? @siddaramaiah @DKShivakumar
@HC_Balakrishna
HC Balakrishna
1 year
ರಾಷ್ಟ್ರಮಟ್ಟದಲ್ಲಿ ಜನಮನ ಗೆದ್ದು ತನ್ನದೇ ಆದ ಗಟ್ಟಿ ಧ್ವನಿಯಿಂದ ಜನಪ್ರೀಯತೆ ಹೊಂದಿರುವ ಅರ್ನಾಬ್ ಗೋಸ್ವಾಮಿ ನೇತೃತ್ವದ @republic ಸುದ್ದಿವಾಹಿನಿ ಇಂದಿನಿಂದ @KannadaRepublic ಮೂಲಕ ಕನ್ನಡ ಲೋಕಕ್ಕೆ ಪಾದಾರ್ಪಣೆ ಮಾಡಿದೆ. ರಿಪಬ್ಲಿಕ್ ಕನ್ನಡ ಸಮಾಜಮುಖಿ ಸುದ್ದಿವಾಹಿನಿಯಾಗಿ ಕಾರ್ಯನಿರ್ವಹಿಸಲಿ, ಕನ್ನಡಿಗರ ದನಿ ಗಟ್ಟಿಗೊಳಿಸಲಿ ಎಂದು ಶುಭ
Tweet media one
15
9
56
11
18
97
@PrahladKH1
Prahlad K H, President, Bharatha Surachana Mandala
1 year
@astitvam ಮೂರ್ಖರಲ್ಲಿ ಅತೀ ಮೂರ್ಖ! ಯಾರದೇ ಕೊಲೆ ಆದರೂ ಅದು ಖಂಡನೀಯ. ಆ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಹಾಗೂ ಜರೂರು ಕ್ರಮಗಳನ್ನು ಕೈಗೊಳ್ಳಬೇಕು. ಆದರೇ ಮೋದಿ ಪರ ಸುಳ್ಳಿನ ಹಡಗನ್ನೇ ಬಿಟ್ಟಂತೆ ಕಾಂಗ್ರೇಸ್ ವಿರುದ್ಧ, ಆಧಾರವಿಲ್ಲದೆ ಎಲ್ಲಾ ಕೊಲೆಗಳನ್ನು ಸೇರಿಸಿ ಮಾತನಾಡುತ್ತಾನೆ ಅಂದರೇ, ಇಷ್ಟರಲ್ಲೇ ಈತನಿಗೆ ವಾಸ್ತವದ ಮನವರಿಕೆ ಆಗಲಿದೆ!
@Samvadatweets
Samvada
1 year
ಕರ್ನಾಟಕ ಹೊತ್ತಿ ಉರಿಯುತ್ತಿದೆ! ಕಾಂಗ್ರೆಸ್ ಸರ್ಕಾರ ತೆಪ್ಪಗಿದೆ । ಚಕ್ರವರ್ತಿ ಸೂಲಿಬೆಲೆ #Samvada #Kannada #Karnataka #YuvaBrigade #congressgovernment #siddaramaiah #Venugopal #Tnarsipura
68
185
508
13
17
96
@PrahladKH1
Prahlad K H, President, Bharatha Surachana Mandala
3 years
ಮೈಯಲ್ಲಾ ಹೂವಾಗಿ ನಿಂತ ರಸಪುರಿ ಮಾವಿನ ಹಣ್ಣಿನ ಮರ: ಅರಳಿದ ಭರವಸೆ!
Tweet media one
3
0
94
@PrahladKH1
Prahlad K H, President, Bharatha Surachana Mandala
2 years
@TruthOrDare3355 @Kannadiga71 @dasadarshan ನಾವು ದರ್ಶನರವರನ್ನು ನಿರ್ಲಕ್ಷಿಸಲು ಆಗುವುದಿಲ್ಲ! ಅವರು ಒಬ್ಬ ಅತ್ಯಂತ ಜನಪ್ರಿಯ ನಟ! ಅವರು ಕೊಂಚ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ ಅತ್ಯುತ್ತಮ ಸಿನೆಮಾಗಳನ್ನು ಕನ್ನಡಿಗರಿಗೆ ನೀಡಬಹುದು!
3
0
95
@PrahladKH1
Prahlad K H, President, Bharatha Surachana Mandala
1 year
ರಂಗ ಮಾರ್ತಾಂಡ - ನಿವೃತ್ತಿ ನಂತರದ ನೋವಿನ ನೋಟಗಳು: ನೋಡಬೇಕಾದ ತೆಲುಗು ಸಿನೆಮಾ! ತಂದೆ-ತಾಯಿಗಳು ಅನುಭವಿಸುವ ಏರಿಳಿತಗಳನ್ನು ಒಬ್ಬ ಯಶಸ್ವಿ ರಂಗನಟನ ಜೀವನದ ಮೂಲಕ ಅನಾವರಣ ಮಾಡಲಾಗಿದೆ! @prakashraaj ರಂಗನಟನ ಪಾತ್ರದಲ್ಲಿ ತ್ರಿವಿಕ್ರಮನಂತೆ ಆವರಿಸಿಕೊಳ್ಳುತ್ತಾರೆ! ರಮ್ಯಕೃಷ್ಣ ಹಾಗೂ ಬ್ರಹ್ಮಾನಂದಂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ!
Tweet media one
13
10
94
@PrahladKH1
Prahlad K H, President, Bharatha Surachana Mandala
2 years
ಆರ್ ಎಸ್ ಎಸ್: ಆಳ ಮತ್ತು ಅಗಲ. ದೇವನೂರ ಮಹಾದೇವರವರ "ದ ಹಿಂದೂ, ೩೧.೦೭.೨೦೨೨" ಸಂದರ್ಶನ! ತಪ್ಪದೇ ಓದಿ!
Tweet media one
1
8
92
@PrahladKH1
Prahlad K H, President, Bharatha Surachana Mandala
4 years
ಕನ್ನಡ ಭಾಷೆಯಿಂದ ಅನ್ನ ಉಣ್ಣುವ ಎಲ್ಲರೂ, (ಕಲಾವಿದ/ತಂತ್ರಜ್ಞರು ಮಾತ್ರವಲ್ಲ), ಕನ್ನಡವನ್ನು ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಬಳಸುವುದು ಹೆತ್ತ ತಾಯಿ-ತಂದೆಯರನ್ನು ಗೌರವಿಸಿದಂತೆ! ಅದು ಅವರ ಅಭಿಮಾನಿ ದೇವರುಗಳಿಗೆ ಕೊಡುವ ಮರ್ಯಾದೆ! #ಕನ್ನಡ_ಬಳಸಿ_ಕಲಾವಿದರೇ_KFI #ಕನ್ನಡ_ಚಲನಚಿತ್ರ_ವಾಣಿಜ್ಯ_ಮಂಡಳಿ #Kannada_Film_Industry
0
22
87
@PrahladKH1
Prahlad K H, President, Bharatha Surachana Mandala
3 years
@BSBommai @narendramodi ಸಾರ್, ಈಗ ಬೆಲೆ ಇಳಿಸಿದ್ದು ಉಡುಗೊರೆಯಾದರೆ ಇಲ್ಲಿಯವರೆಗೂ ಬೆಲೆ ಹೆಚ್ಚಿಸಿ ಹಾಕಿದ್ದು ಬರೆಗಳೇ? ಏನೀ ಒಣ ಮಾತು!
2
13
91
@PrahladKH1
Prahlad K H, President, Bharatha Surachana Mandala
4 years
@hd_kumaraswamy ನಿಮ್ಮದು ಇರುಳು ಕಂಡ ಬಾವಿಗೆ ಹಗಲು ಬೀಳುವ ಬುದ್ಧಿವಂತಿಕೆ! ಬೇಕಾದಾಗ ಬಿಜೆಪಿ ಜೊತೆ ಕೂಡಿಕೆ ಮಾಡಿಕೊಳ್ಳುತ್ತೀರಿ! ನಂತರ ಈ ರೀತಿ ಟ್ವೀಟ್ ಕೂಡಾ ಮಾಡುತ್ತೀರಿ! ನೀವು, ನಿಮ್ಮ ಪಕ್ಷ ನಿರಂತರವಾಗಿ ಗೊಂದಲದ ಗೂಡಾಗಿ ಜನರಿಗೆ ಕಾಣುತ್ತದೆ! 9 ನೀತಿ ಸೂತ್ರಗಳನ್ನು ರೂಪಿಸಿಕೊಂಡು ಅದರಂತೆ ರಾಜಕೀಯ ಮಾಡಿ! ಈ ಬಗ್ಗೆ ಸಲಹೆ ಬೇಕಾದರೆ ನನಗೆ ಕೇಳಿ!
0
6
88
@PrahladKH1
Prahlad K H, President, Bharatha Surachana Mandala
4 years
@hd_kumaraswamy ಸಾರ್, ತಡವಾದರೂ ತಮ್ಮ ಸಂದೇಶಕ್ಕೆ ನಮ್ಮ ಬೆಂಬಲವಿದೆ! ಇನ್ನು ಮುಂದೆ, ಭಾಷೆ ಬಗ್ಗೆ, ತಮಿಳು ರಾಜಕೀಯ ನಾಯಕರಿಗಿಂತ ಮುಂಚೆ ಮಾತನಾಡಿ!
1
9
88
@PrahladKH1
Prahlad K H, President, Bharatha Surachana Mandala
2 years
ಈ ಬಗ್ಗೆ ರಾಜಕೀಯ ಪಕ್ಷಗಳು, ಸಂಘಟನೆಗಳು, ಇತರ ಪ್ರಮುಖರು ಟ್ವೀಟ್ ಮಾಡಿಕೊಂಡು, ಪತ್ರ ಬರೆದುಕೊಂಡು ಕಾಲಹರಣ ಮಾಡುತ್ತಿವೆ! ತಕ್ಷಣ ಬೀದಿಗಿಳಿದು ಹೋರಾಟ ಮಾಡಬೇಕು, ಸದನದ ಹಕ್ಕು ಬಳಸಿ ಅಥವಾ ಕೋರ್ಟ್ ಮೂಲಕ ನಿಲ್ಲಿಸಲು ಪ್ರಯತ್ನಿಸಬೇಕು! ಇಲ್ಲದಿದ್ದರೇ, @RohitMath @BCNagesh_bjp ಮತ್ತು @BSBommai ಗಳು ದೊಡ್ಡ ಅವಾಂತರವನ್ನೇ ಮಾಡುವರು!
@prajavani
Prajavani
2 years
ರೋಹಿತ್‌ ಚಕ್ರತೀರ್ಥ ಐಐಟಿ ಪ್ರೊಫೆಸರ್‌: ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ @INCKarnataka @hd_kumaraswamy @siddaramaiah @PriyankKharge @dineshgrao
44
5
55
2
22
85
@PrahladKH1
Prahlad K H, President, Bharatha Surachana Mandala
1 year
ಶ್ರೀ ದೇವರಾಜ ಅರಸು ಎಲೆಕ್ಟ್ರಾನಿಕ್ಸ್ ನಗರ! ಎಂದಾಗಿ ಮರು ನಾಮಕರಣ ಮಾಡಬೇಕೆಂಬ ನಿಮ್ಮ ಆಲೋಚನೆ ಅತ್ಯಂತ ಸೂಕ್ತವಾಗಿದೆ! @siddaramaiah ರವರೆ! ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಮೊದಲ ಸ್ಥಾನ ಪಡೆಯುವ ಅರಸುರವರ ಹೆಸರಿನಲ್ಲಿ ಸಾರ್ವಜನಿಕವಾಗಿ ಅಗತ್ಯವಿರುವಷ್ಟು ನಾಮಕರಣಗಳು ಆಗಿಲ್ಲ! @DKShivakumar
9
15
90
@PrahladKH1
Prahlad K H, President, Bharatha Surachana Mandala
4 years
@HKS_ENIGMA ನಾವು ಹಿಂದೂ ಅನ್ನುವ ಪದವನ್ನು ತಿರಸ್ಕರಿಸಿ, "ಕನ್ನಡ - ಭಾರತೀಯ" ಎಂದು ಕರೆದುಕೊಳ್ಳಬೇಕು! ಹಿಂದೂ ಅನ್ನುವ ಪದ ಬಿಜೆಪಿಯವರಿಗೆ ಗಿರಿಜನ, ದಲಿತ, ಮತ್ತು ಶೂದ್ರರನ್ನು ಅಭಿವೃದ್ಧಿ ಗೊಳಿಸದೇ ಮುಂದುವರೆದ ಜಾತಿಗಳ ಜೊತೆ ಸೇರಿಸಿ ಮುಸ್ಲಿಮರ ವಿರುದ್ಧ ಆಡುವ ಆಟದ ತಂತ್ರವಾಗಿದೆ!
6
21
81
@PrahladKH1
Prahlad K H, President, Bharatha Surachana Mandala
3 years
ಆರಕ್ಕೆ ಏರದ @hd_kumaraswamy ! ಎರಡು ಬಾರಿ ಮುಖ್ಯಮಂತ್ರಿಯಾದರೂ, ಕುಟುಂಬ-ಕುಲಬಾಂಧವರ ಒಳಸುಳಿಗಳಿಂದ ಹೊರಬರದೆ, ಸಿಕ್ಕ ಸಿಕ್ಕ ವ್ಯಕ್ತಿ-ವಿಷಯಗಳ ಬಗ್ಗೆ ಮೈಕ್ ಹಿಡಿದಾಗಲೆಲ್ಲಾ ಮಾತಿನವಾಂತಿ ಮಾಡುವದನ್ನು ನೋಡಿದರೇ ಇವರೇನಾ ಒಮ್ಮೊಮ್ಮೆ ನಾಡು-ನುಡಿಯ ಬಗ್ಗೆ ತೂಕವಾಗಿ ಮಾತನಾಡುವುದು ಎಂದು ಅನುಮಾನ ಶುರುವಾಗುತ್ತದೆ! ಆದ್ಯತೆ ರೂಪಿಸಿಕೊಳ್ಳಲಿ!
Tweet media one
4
11
84
@PrahladKH1
Prahlad K H, President, Bharatha Surachana Mandala
3 years
2023 ರಲ್ಲಿ ಪ್ರಬಲ ಜೆಡಿಎಸ್ ಸರ್ಕಾರ: ಕಾರ್ಯಸೂಚಿ - 6 ಬೆಳೆದ ಉತ್ಪತ್ತಿಯನ್ನು, ಮೊದಲೇ ನಿರ್ಧರಿಸಿದ, ಲಾಭದಾಯಕವಾದ ಉತ್ತಮ ಬೆಲೆಗೆ ರೈತರ ಭೂಮಿಯಿಂದಲೇ ಪಡೆದು ಸಾಗಾಟ ಹಾಗೂ ಮಾರಾಟ ಮಾಡುವ, ಕಂಪ್ಯೂಟರ್ ಆಧಾರಿತ ಸಮಗ್ರ ವ್ಯವಸ್ಥೆ ಜಾರಿ ಮಾಡಬೇಕು! @H_D_Devegowda @hd_kumaraswamy @hd_revanna @YSV_Datta @Kanagalogy @kbsgowda
0
14
85
@PrahladKH1
Prahlad K H, President, Bharatha Surachana Mandala
3 years
ಎಲ್ಲಾ ಕನ್ನಡಿಗರೂ, ಕೇವಲ ಕನ್ನಡ ಪರ ಸಂಘಟನೆಗಳಲ್ಲಾ, ಎಲ್ಲಾ ಹಿಂದಿ ನಾಮ ಫಲಕಗಳಿಗೆ ಮಸಿ ಬಳೆಯುವ ಒಂದು ದಿನದ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳುವ ಅನಿವಾರ್ಯವಿದೆ! ಇದರಿಂದ ರಾಜ್ಯ ಮತ್ತು ಒಕ್ಕೂಟದ ಸರ್ಕಾರಗಳಿಗೆ ಸೂಕ್ತ ಸಂದೇಶ ರವಾನೆಯಾಗುತ್ತದೆ! #ಹಿಂದಿ_ಬೋರ್ಡ್ಗೆ_ಮಸಿ
1
28
82
@PrahladKH1
Prahlad K H, President, Bharatha Surachana Mandala
4 years
@prajavani ನನ್ನ ಹೆಸರು ಪ್ರಹ್ಲಾದ ಕೆ ಹನುಮಂತಯ್ಯ! ನಮ್ಮ ಮನೆತನದ ದೇವರಾದ ಹೆಬ್ಬೂರಿನ ಶ್ರೀ ವೀರಾಂಜನೇಯ ಸ್ವಾಮಿ ಜಯಂತಿಗೆ, ಪ್ರತಿವರ್ಷ ಸಾವಿರಾರು ಜನರಿಗೆ ಅನ್ನದಾನ/ ಉತ್ಸವವನ್ನು ಸ್ವಂತ ಖರ್ಚಿನಿಂದ ನಡೆಸುತ್ತೇವೆ! ಈ ಬಾರಿ ಕರೋನದಿಂದ ಮಾಡಲಿಲ್ಲ! ಪ್ರತಿ ಶನಿವಾರ ಸಂಜೆ ಶ್ರೀ ಹನುಮಂತ ದೇವರ ದರ್ಶನ ಪಡೆದ ನಂತರ, ಮಾಂಸದೂಟ ಮಾಡುವುದು ನಮ್ಮ ಪದ್ಧತಿ!
2
10
75
@PrahladKH1
Prahlad K H, President, Bharatha Surachana Mandala
5 years
ನೀವು ನೋಡಬೇಕಾದ ಒಂದು ದೇವಸ್ಥಾನ! ದೊಡ್ಡಗದ್ದವಳ್ಳಿಯು ಹೊಯ್ಸಳ ಶೈಲಿಯ ಪುರಾತನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಸಿದ್ಧಿ. ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ 16 ಕಿ.ಮೀ. ಸಾಗಿದರೆ ಸಿಗುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯಾದ ಮಹಾಲಕ್ಷ್ಮಿ ದೇವಸ್ಥಾನವನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಕ್ರಿ.ಶ. 1114ರಲ್ಲಿ
Tweet media one
Tweet media two
3
9
76
@PrahladKH1
Prahlad K H, President, Bharatha Surachana Mandala
4 years
ಕುರುಡು(ಕೂಡು) ಮಲೆ ಗಣೇಶ ದೇವಾಲಯ: ತಪ್ಪದೇ ಸಂದರ್ಶಿಸಿ ಪುರಾಣ ಕಾಲದ ಯಾತ್ರಾಸ್ಥಳ! ಮುಳಬಾಗಿಲು ಹತ್ತಿರವಿರುವ ಈ ಕ್ಷೇತ್ರದಲ್ಲಿ ಕೌಂಡಿನ್ಯ ಮುನಿ ಪ್ರತಿಷ್ಠಾಪಿಸಿದ ಪಚ್ಚೆ ಸಾಲಿಗ್ರಾಮದ ಹದಿಮೂರುವರೆ ಅಡಿ ಎತ್ತರದ ಅಪೂರ್ವ ಗಣೇಶ ವಿಗ್ರಹವಿದೆ! ತ್ರಿಮೂರ್ತಿಗಳ ಶಕ್ತಿಕೇಂದ್ರವೆಂದು ತಿಳಿಯುವ ಈ ಗುಡಿಯ ಹತ್ತಿರವೇ ಚೋಳರ ಕಾಲದ ಶಿವ ದೇಗುಲವಿದೆ
Tweet media one
Tweet media two
Tweet media three
Tweet media four
3
19
77
@PrahladKH1
Prahlad K H, President, Bharatha Surachana Mandala
5 years
@SadhguruJV Sir Looks like you need to do more dhyan to get true gyan! 1. If a secular country makes a law to provide citizenship based on religious persecution then it should make provision for all religions. 2. To catch a fraction of illegal aliens you don't need to harass the rest! 1/2
8
4
69
@PrahladKH1
Prahlad K H, President, Bharatha Surachana Mandala
3 years
2023 ರಲ್ಲಿ ಪ್ರಬಲ ಜೆಡಿಎಸ್ ಸರ್ಕಾರ: ಕಾರ್ಯಸೂಚಿ - 5 ಜಲಪ್ರವಾಹ, ಭೂಕಂಪ, ಬರಗಾಲ, ಬಿರುಗಾಳಿ, ಬೆಂಕಿ ಅನಾಹುತ, ಮತ್ತು ಭಯಂಕರ ಅಪಘಾತ ಇತ್ಯಾದಿ ವಿಪತ್ತುಗಳ ಸಂಪೂರ್ಣ ನಿರ್ವಹಣೆಗೆ ಸದೃಢ, ಸನ್ನದ್ಧ ಹಾಗೂ ಸುಸಜ್ಜಿತ ಸಚಿವಾಲಯವನ್ನು ರೂಪಿಸಬೇಕು! @H_D_Devegowda @hd_kumaraswamy @hd_revanna @YSV_Datta @Kanagalogy @kbsgowda
2
10
80
@PrahladKH1
Prahlad K H, President, Bharatha Surachana Mandala
6 months
#ಸುಮಲತಾ_ಅಂಬರೀಷ್: ರಾಜಕಾರಣಕ್ಕೆ ವಿದಾಯ ಹೇಳಲು ಸಕಾಲ! ಗಂಡನ ಜನಪ್ರಿಯತೆ ಹಾಗೂ ಜನಪರತೆ ಮತ್ತು ಹೊಸ ಸಾಧ್ಯತೆಯ ಕನಸ ಕಂಡ ಪ್ರಜ್ಞಾವಂತ ಕನ್ನಡಿಗರ ಬೆಂಬಲದಿಂದ ಗೆದ್ದ ಈಕೆಗೆ ರಾಜಕೀಯ ಅರ್ಥವಾಗಲಿಲ್ಲ! ಈಗ ಮೊದಲಿನ ಬೆಂಬಲ ಇಲ್ಲ! @BJP4India @BJP4Karnataka @narendramodi @AmitShah @JPNadda #ಲೋಕಸಭಾ_ಚುನಾವಣೆ_ಟಿಪ್ಪಣಿ: ೩
Tweet media one
7
12
79
@PrahladKH1
Prahlad K H, President, Bharatha Surachana Mandala
2 years
@siddaramaiah ಬಾಯಿರುಚಿ Vs ಮಡಿ ಮಾಧ್ಯಮದವರ ಬಚ್ಚಲುಬಾಯಿ ಕೋಳಿ ಖಾದ್ಯಗಳು ವಾಜಪೇಯಿಯವರಿಂದ ಹಿಡಿದು ಪುನೀತ್ ರಾಜಕುಮಾರರವರಗೆ ಸರ್ವರಿಗೂ ಪ್ರಿಯ! ಒಡಲು ಹಾಗೂ ಮಿದುಳಲ್ಲಿ ಸದಾ ಹೊಲಸನ್ನೆ ತು��ಬಿಕೊಂಡಿರುವ ಮಾನವ ಕೋಳಿ ಅಥವಾ ಸೊಪ್ಪು ತಿಂದು ಇಲ್ಲಾ ಉಪವಾಸದಿಂದ ಯಾರೂ ಅರಿಯದೆ ಸೃಷ್ಟಿಸಿರುವ ಗುಡಿಯನ್ನು ಹೊಕ್ಕರೆ ಬೇಡವೆನ್ನುವ ದೇವರಿರುವರೆ?
Tweet media one
Tweet media two
1
14
78
@PrahladKH1
Prahlad K H, President, Bharatha Surachana Mandala
1 year
"ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ" ಎಂಬ ಘೋಷಣೆ ಸಾಕೇ @siddaramaiah ರವರೇ? ಇಂದು ಕನ್ನಡ ಭಾಷೆ ತನ್ನ ನೆಲದಲ್ಲೇ ಅಸ್ಥಿರವಾಗಿದೆ! ಅದನ್ನು ಜತನದಿಂದ ಕಾಪಾಡಿ ಸುಸ್ಥಿರಗೊಳಿಸಬೇಕಾಗಿದೆ! ಗ್ಯಾರಂಟಿಗಳ ಜಾರಿ ಮತ್ತು ಲೋಕಸಭೆ ಚುನಾವಣೆ ಗೆಲ್ಲುವ ಭರದಲ್ಲಿ ಕನ್ನಡ ಬಲಿಯಾಗದಿರಲಿ! @DKShivakumar @sstangadagi @osd_cmkarnataka
Tweet media one
Tweet media two
Tweet media three
Tweet media four
0
46
80
@PrahladKH1
Prahlad K H, President, Bharatha Surachana Mandala
3 years
ವಿಶ್ವ ಸಂಸ್ಥೆ ಬೇಕೇ? ಬೇಡವೇ? ಮನುಷ್ಯರನ್ನು ಕೊಂದೇ ಬಗೆಹರಿಸಿ ಕೊಳ್ಳಬೇಕಾಗಿರುವ ಸಮಸ್ಯೆಗಳು ಇನ್ನೂ ಇವೆಯೇ? ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ "ಸಧ್ಯ ಸ್ವರೂಪದ ವಿಶ್ವ ಸಂಸ್ಥೆಯ ಅನಿವಾರ್ಯತೆ ಜಗತ್ತಿಗಿದೆಯೆ?" ಅನ್ನುವುದು ಮುಖ್ಯಪ್ರಶ್ನೆಯಾಗಿದೆ! ಒಂದು ಯುದ್ಧ ತಪ್ಪಿಸಲು ಸಾಧ್ಯವಿಲ್ಲದಿದ್ದರೆ ಅದನ್ನು ಮುಚ್ಚುವುದೇ ಸರಿ!
3
18
74
@PrahladKH1
Prahlad K H, President, Bharatha Surachana Mandala
2 years
ಹಾಳಾದ ಸರ್ವ ಜನಾಂಗದ ಶಾಂತಿಯ ತೋಟ! ಬಿಜೆಪಿಯ ಆಡಳಿತದಲ್ಲಿ ಎಗ್ಗಿಲ್ಲದೆ, ಫಲಾಫಲಗಳನ್ನು ಲೆಕ್ಕಿಸದೆ ಮುಸ್ಲಿಂನಂಥ ಧರ್ಮಗಳ ವಿರುದ್ಧ ಹಲವಾರು ಪಟ್ಟಭದ್ರ ಹಿತಾಸಕ್ತಿಗಳು ದ್ವೇಷ ಹರಡುತಿದ್ದಾರೆ! ಪರಿಹಾರ ಹುಡುಕುವುದು @H_D_Devegowda @siddaramaiah @DKShivakumar @hd_kumaraswamy @DrParameshwara @hd_revanna ರ ಜವಾಬ್ಧಾರಿ!
9
10
76
@PrahladKH1
Prahlad K H, President, Bharatha Surachana Mandala
2 years
@prajavani @mepratap ರೇ, ನೀವು ಮೈಸೂರು - ಕೊಡಗು ಸಂಸದ! ಅದಕ್ಕೆ ಸಂಬಂಧ ಪಟ್ಟ ಹಾಗೇ ಕೆಲಸ ಮಾಡಿಕೊಂಡು ಇರೋದ್ ಬಿಟ್ಟು ಉಳಿದೆಲ್ಲಾ ವಿಷಯಗಳ ಬಗ್ಗೆ ಮೂತಿ ತೂರಿಸುವುದು ಏಕೆ? ಸಂಸದರಾಗಿ ಮಾಡಲು ಕೆಲಸ ಇಲ್ಲವಾ! ಒಬ್ಬ ಸೃಜನಶೀಲ ಸಾಹಿತಿ ತನಗೆ ಇಷ್ಟಬಂದಹಾಗೆ ವರ್ತಿಸುವ! ಒಬ್ಬರ ಮಾತಿನಂತೆ ಬಾಳಲು ಆತನೇನು ರಾಜಕಾರಣಿಯೇ/ ಅಧಿಕಾರಿಯೇ! ಇಷ್ಟು ತಿಳಿಯದೇ?
2
12
74
@PrahladKH1
Prahlad K H, President, Bharatha Surachana Mandala
2 years
ಸದ್ಗುರು: ಸಕಲ ವಿಷಯಗಳ ಬಗ್ಗೆ ನಿರಂತರ ಬೊಬ್ಬೆ-ಬುರುಡೆ! ಈತ ಹೇಳುವುದು ಏನೆಂದು ಈತಗೇ ಗೊತ್ತಿಲ್ಲ! ಪ್ರಚಾರಕ್ಕೆ ಹಾತೊರೆವ ಈತನಿಗೆ ಪ್ರಚಲಿತ ಪ್ರಸಿದ್ಧ ವಿಷಯಗಳಿಗೆ ಸಂಬಂಧಪಟ್ಟಂತೆ ಒಂದಷ್ಟು ಹಲುಬುವುದು ಹವ್ಯಾಸ! ಜೊತೆಗೆ ರಾಜಕಾರಣಿಯ ಕುಮ್ಮಕ್ಕು! ಇದಕ್ಕೆ ಉತ್ತಮ ಉದಾಹರಣೆ ಕಾಂತಾರ ಸಿನೆಮಾ ಯಶಸ್ವಿಯಾದ ಮೇಲೆ ದೈವಗಳ ಬಗ್ಗೆ ಆಡಿರುವ ಮಾತು!
Tweet media one
9
9
78
@PrahladKH1
Prahlad K H, President, Bharatha Surachana Mandala
10 months
ಏರಲಿ, ಹಾರಲಿ ಕನ್ನಡದ ಬಾವುಟ! ಕುದೂರು ಬೆಟ್ಟದ ಮೇಲೆ! #KannadaFlag_MyPride #ಕನ್ನಡಬಾವುಟ_ನಮ್ಮಗುರುತು
Tweet media one
@PrahladKH1
Prahlad K H, President, Bharatha Surachana Mandala
10 months
ಏರಲಿ, ಹಾರಲಿ ಕನ್ನಡದ ಬಾವುಟ! #KannadaFlag_MyPride #ಕನ್ನಡಬಾವುಟ_ನಮ್ಮಗುರುತು
Tweet media one
1
4
45
2
5
79